ಮುಂಡಗೋಡ: ಪಟ್ಟಣದಲ್ಲಿ ಚಿರತೆ ಸಂಚಾರ
ಮುಂಡಗೋಡ 16: ಪಟ್ಟಣದಲ್ಲಿ ಚಿರತೆ ಸಂಚರಿಸುತ್ತಿದೆ ಎಂಬುದನ್ನು ಕೆಲವರು ದೃಡಪಡಿಸುತ್ತಿದ್ದಾರೆ ಹಾಗೂ ಪಟ್ಟಣದ ಕೆಲವಂದು ಮಾರ್ಗದಲ್ಲಿ ಸಂಚರಿಸಬೇಡಿ ಎಂದು ಹೇಳುತ್ತಿರುವುದು ಕಂಡು ಬರುತ್ತಿದೆ.
ಪಟ್ಟಣದ ಮಳಗನಕೊಪ್ಪ ಗ್ರಾಮ ಸುತ್ತಲು ಹಾಗೂ ಗಾಂಧಿನಗರ ಸಮೀಪದ ಘನತಾಜ್ಯ ಡಂಪಿಂಗ್ ಮಾಡುವ ಸ್ಥಳದ ಸುತ್ತ ಮುತ್ತಲೂ ಮತ್ತು ಸನವಳ್ಳಿ ಗ್ರಾಮದ ಬಂಕಾಪುರ ರಸ್ತೆಯಲ್ಲಿ ಚಿರತೆ ಕಂಡು ಬಂದಿದೆ ಎಂದು ಬೆಳಗಿನ ವಾಕ್ ಹೋದವರು ಹೇಳುತ್ತಿದ್ದಾರೆ.
ಇದರಿಂದ ಬಂಕಾಪುರ ರಸ್ತೆಗೆ ವಾಕಿಂಗ್ಗೆ ಹೋಗಲು ಹಾಗೂ ಆ ಪ್ರದೇಶದಲ್ಲಿರುವ ನಿವಾಸಿಗಳು ಹೆದರುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಕುರಿತು ಅರಣ್ಯ ಇಲಾಖೆ ಇತ್ತ ಗಮನಕೊಡುವುದು ಅವಶ್ಯವಾಗಿದೆ.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 