ಕೋವಿಡ್ ಪಾಸ್ಗಳ ದುರ್ಬಳಕೆ: ಕ್ರಮಕ್ಕೆ ಎಎಪಿ ಒತ್ತಾಯ
ಬೆಂಗಳೂರು,
ಏ.5,ಕೊರೊನಾ ಮಹಾಮಾರಿಯ ದುರಂತದಿಂದ ಹೊರಬರಲು ಲಾಕ್ಡೌನ್ ಜಾರಿಯ ವೇಳೆ
ತುರ್ತು ಕಾರ್ಯ ನಿರ್ವಹಣೆಗೆ ವಿತರಿಸಿರುವ ಪಾಸ್ ಗಳನ್ನು ದುರ್ಬಳಕೆ ಮಾಡುತ್ತಿರುವವರ
ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.ಐಷಾರಾಮಿ
ಜೀವನಶೈಲಿಯನ್ನು ಇಂತಹ ಲಾಕ್ ಡೌನ್ ಸಂದರ್ಭಗಳಲ್ಲಿ ಮುಂದುವರಿಸಿಕೊಂಡು ಹೋಗಲು ಸಮಾಜದ
ಕೆಲ ದುಷ್ಟ ವ್ಯಕ್ತಿಗಳು ಹವಣಿಸುತ್ತಿರುವುದು ದುರದೃಷ್ಟವೇ ಸರಿ. ಇಂತಹ ಸಮಾಜಘಾತಕ
ಶಕ್ತಿಗಳ ವಿರುದ್ಧ ಸರ್ಕಾರವು ತೀವ್ರವಾದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ಈ
ಪಾಸ್ ನೀಡಿಕೆಯ ಸಂದರ್ಭದಲ್ಲಿ ಅನೇಕ ಉನ್ನತ ಅಧಿಕಾರಿಗಳು, ರಾಜಕಾರಣಿಗಳು ತಮ್ಮ
ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಶಿಫಾರಸ್ಸು ಹಾಗೂ ಒತ್ತಡವನ್ನು ಏರಿ ತಮ್ಮ
ಕಡೆಯವರಿಗೆ ಪಾಸ್ ಗಳನ್ನು ವಿತರಿಸಿರುವ ದುಷ್ಪರಿಣಾಮವೇ ನಡೆದಿರುವ ಶರ್ಮಿಳಾ ಮಾಂಡ್ರೆ
ಅವರ ಅಪಘಾತ ಪ್ರಕರಣ. ಇಂತಹ ಮಂದಿಗೆಲ್ಲಾ ರಾಜ್ಯ ಪೊಲೀಸರ ಕ್ಲಿಯರ್ ಪಾಸ್ ಹೇಗೆ
ದೊರಕಿತೆಂದು ತನಿಖೆಗೆ ಒಳಪಡಬೇಕಿದೆ ಎಂದು ಒತ್ತಾಯಿಸಿದೆ.ಈಗಾಗಲೇ ಅನಗತ್ಯವಾಗಿ
ರಸ್ತೆಗಳಲ್ಲಿ ವಾಹನ ಚಲಾಯಿಸುತ್ತಿದ್ದ 10 ಸಾವಿರಕ್ಕೂ ಹೆಚ್ಚಿನ ವಾಹನಗಳನ್ನು ವಶಕ್ಕೆ
ಪಡೆದಿರುವ ರೀತಿಯಲ್ಲಿಯೇ ಪಾಸ್ ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ವಿರುದ್ಧವೂ
ಸಹ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ. ಪಾಸ್ ವಿತರಣೆಯ ಸಂದರ್ಭದಲ್ಲಿ ಪ್ರಭಾವಿಗಳ
ಒತ್ತಡವೇ ಈ ಎಲ್ಲ ಅವಘಡಗಳಿಗೆ ಕಾರಣವಾಗುತ್ತಿದೆ. ಬೆಂಗಳೂರಿನ ಪೊಲೀಸರು ಎಲ್ಲ ಕಡೆ
ಅತ್ಯಂತ ಕಟ್ಟುನಿಟ್ಟಾಗಿ ಇಂತಹ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪಾಸ್ ಹೊಂದಿರುವ
ವ್ಯಕ್ತಿಗಳನ್ನು ಗುರುತಿಸಿ ಇವರುಗಳ ವಿರುದ್ಧ ಗೂಂಡಾ ಕಾಯ್ದೆಯನ್ನು ಬಳಸಿ ಉಗ್ರ ಕ್ರಮ
ಕೈಗೊಳ್ಳಬೇಕೆಂದು ಆಮ್ ಆದ್ಮಿ ಪಾರ್ಟಿ ಹೇಳಿಕೆಯಲ್ಲಿ ಒತ್ತಾಯಿಸಿದೆ.
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು 