ಮಸೂದ್ ಅಝರ್ ಜಾಗತಿಕ ಉಗ್ರ ಪಟ್ಟದಿಂದ ಬಿಜೆಪಿಗೆ ಆನೆಬಲ: ಓಮರ್ ಟೀಕೆ
ಶ್ರೀನಗರ, ಮೇ 2ಪ್ರಧಾನಿ ಮೋದಿ ಮರು ಆಯ್ಕೆ ಬಯಸುತ್ತಿರುವ ಸಮಯದಲ್ಲಿ ಜೈಶ್ ಎ ಮಹಮ್ಮದ್ ಉಗ್ರ ಮಸೂದ್ ಅಝರ್ನನ್ನು ವಿಶ್ವಸಂಸ್ಥೆ ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸಲು ಮುಂದಾಗಿರುವುದು ಬಿಜೆಪಿಗೆ ಆನೆಬಲ ನೀಡಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ವ್ಯಂಗವಾಡಿದ್ದಾರೆ ಕಾಶ್ಮೀರದಲ್ಲಿನ ಭಯೋತ್ಪಾದನೆ ಬಗ್ಗೆ ಮತ್ತು ಜೆಎಂನಿಂದ 44 ಸಿಆಪರ್ಿಎಫ್ ಸಿಬ್ಬಂದಿಗಳು ಈ ವರ್ಷ ಫೆಬ್ರವರಿ 14 ರಂದು ಪುಲ್ವಾಮಾದಲ್ಲಿನ ಅವಂತಿಪೋರಾದಲ್ಲಿ ಹುತಾತ್ಮರಾದ ಕುರಿತು ಯಾವುದೇ ಉಲ್ಲೇಖವಿಲ್ಲ. ಆದಾಗ್ಯೂ ಅಝರ್ಗೆ ಜಾಗತಿಕ ಭಯೋತ್ಪಾದಕ ಪಟ್ಟ ಒಂದು ಸಾಂಕೇತಿಕ ಜಯ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಓಮರ್, ಪ್ರತಿ ಸಲ ಬಿಜೆಪಿ ಪ್ರಚಾರಕ್ಕೆ ಒಂದು ಅಸ್ತ್ರವನ್ನು ಪಡೆಯುತ್ತದೆ. ಮೋದಿ ಮರುಚುನಾವಣೆ ಬಯಸುತ್ತಿರುವ ವೇಳೆಯಲ್ಲಿ ಅಝರ್ಗೆ ಈ ಪಟ್ಟ ಲಭಿಸಿದೆ. ಇದಕ್ಕಿಂತ ಉತ್ತಮ ಸಮಯ ಬೇಕಿಲ್ಲ ಎಂದು ವ್ಯಂಗ್ಯ ನುಡಿದಿದ್ದಾರೆ.
ಒಂದು ಸಾಂಕೇತಿಕ ಜಯ ಸಾಧಿಸಲು ಎಷ್ಟು ಬೇಗ ಹುತಾತ್ಮ ಯೋಧರ ಬಲಿದಾನವನ್ನು ನದಿಗೆ ಎಸೆಯಲಾಗಿದೆ. ವಿಶ್ವಸಂಸ್ಥೆ ಈ ನಿರ್ಣಯದಲ್ಲಿ ಕಾಶ್ಮೀರದಲ್ಲಿನ ಭಯೋತ್ಪಾದನೆಯ, ಪುಲ್ವಾಮ ದಾಳಿಯ ಉಲ್ಲೇಖವಿಲ್ಲ ಎಂದು ಓಮರ್ ಬೇಸರ ವ್ಯಕ್ತಪಡಿಸಿದ್ದಾರೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 