ಲಿಂಗರಾಜರ 158 ನೇ ಜಯಂತಿ
ಲೋಕದರ್ಶನ ವರದಿ
ಶಿರಸಂಗಿ 14: ಸ್ಥಳೀಯ ಲಿಂಗರಾಜರ 158 ನೇ ಜಯಂತಿಯನ್ನು ಗ್ರಾಮದಲ್ಲಿ ಗುರುವಾರ ಅದ್ಧೂರಿಯಾಗಿ ಆಚರಿಸಲಾಯಿತು. ಲಿಂಗರಾಜ ಸ್ಮಾರಕ ಶಿಕ್ಷಣ ಸಮಿತಿ, ಲಿಂಗರಾಜ ಉತ್ಸವ ಸಮಿತಿ ಸೇರಿದಂತೆ ಗ್ರಾಮಸ್ಥರ ಆಶ್ರಯದಲ್ಲಿ ಜರುಗಿದ ಜಯಂತಿಯಲ್ಲಿ ಲಿಂಗರಾಜ ಪ್ರೌಢ ಶಾಲೆಯ ಶಿಕ್ಷಕರು, ಆಡಳಿತ ಮಂಡಳಿಯವರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಲಿಂಗರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಲಿಂಗರಾಜ ಪ್ರೌಢಶಾಲೆಯಿಂದ ಕೋಟೆಯತನ ಲಿಂಗರಾಜರ ಭಾವಚಿತ್ರ ಮೆರವಣಿಗೆ ಜರುಗಿತು. ವಿಶ್ವಶಕ್ತಿ ಆದರ್ಶ ವಿದ್ಯಾಲಯದ ವಿದ್ಯಾಥರ್ಿನಿ ಕುಮಾರಿ ಲಕ್ಷ್ಮೀ ಸುಕಂದ ಲಿಂಗರಾಜರ ವೇಷ ಭೂಷಣಧರಿಸಿ ಜಯಂತಿಗೆ ಮೆರಗುತಂದಳು. ಶಿವಾಜಿ ಶಿಂಧೆ, ಮಾಬುಸುಭಾನಿ ಯಲಿಗಾರ, ಎಸ್.ಎಮ್. ಪಾಟೀಲ, ವಿ.ವಿ. ವೀರನಗೌಡ್ರ, ಕೆ.ಐ. ಕಲಾಲ, ಜಿ.ಟಿ. ಧಡೆಮ್ಮ,ನವರ, ಮಲ್ಲಿಕಾಜರ್ುನ ತೊರಣಗಟ್ಟಿ, ಪ್ರಭು ಅಣ್ಣಿಗೇರಿ, ಎಸ್.ಎಸ್. ಗುಳ್ಳ, ಎಮ್.ಎಸ್. ತೊರಗಲ್, ಕಾಂತೇಶ ಪಟ್ಟೇದ, ಬಿ.ಪಿ. ಗಾಣಗೇರ ಸೇರಿದಂತೆ ಮತ್ತಿತರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 