ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣಕ್ಕೆ ಚಾಲನೆ
Launch of the Granthraja Jnaneshwari Parayana
ಲೋಕದರ್ಶನ ವರದಿ
ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣಕ್ಕೆ ಚಾಲನೆ
ಹಾರೂಗೇರಿ 20: ಲೋಕಕಲ್ಯಾಣ ಮತ್ತು ಸಾರ್ಥಕ ಬದುಕಿಗೆ ದೇವನಾಮಸ್ಮರಣೆ, ಅರ್ಥಪೂರ್ಣ ಗ್ರಂಥಗಳ ಪಠಣೆ ಅವಶ್ಯವಿದೆ. ಪಾಂಡುರಂಗನ ಧ್ಯಾನ, ಪವಾಡ ಹಾಗೂ ಚರಿತ್ರೆಗಳನ್ನು ತಿಳಿದುಕೊಂಡು, ಪಠಣ ಮಾಡುವುದರಿಂದ ಬದುಕು ಪಾವನವಾಗುತ್ತದೆ ಎಂದು ಸಂತಶ್ರೀ ಪಾಂಡುರಂಗ ಧರ್ಮಟ್ಟಿ ಹೇಳಿದರು.
ಪಟ್ಟಣದ ವಿಠ್ಠಲ ದೇವಸ್ಥಾನದಲ್ಲಿ ಗುರುವಾರ ಏಳು ದಿನಗಳವರೆಗೆ ನಡೆಯುತ್ತಿರುವ 55ನೇ ಸಪ್ತಾಹ ಮತ್ತು ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ ಹಾಗೂ ಅಖಂಡ ಹರಿನಾಮ ಸಪ್ತಾಹ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸುಖ, ನೆಮ್ಮದಿಯ ಜೀವನಕ್ಕೆ ದೇವರ ಅನುಗ್ರಹ, ಆಧ್ಯಾತ್ಮಿಕ ಮತ್ತು ಧರ್ಮದ ಅರಿವು ಅಗತ್ಯವಿದೆ ಎಂದರು.
ವಡಗೋಲದ ವ್ಯಾಸ ಪೀಠಾಧಿಕಾರಿ ವಿಕ್ರಮ ಸಿಂಗಾಡಿ 55ನೇ ಸಪ್ತಾಹಕ್ಕೆ ಚಾಲನೆ ನೀಡಿ, ಏಳು ದಿನಗಳವರೆಗೆ ಪ್ರತಿದಿನ ಲೋಕಕಲ್ಯಾಣಕ್ಕಾಗಿ ಪಾರಾಯಣ, ಸಾಮೂಹಿಕ ಕಾಕಡಾರತಿ ಮತ್ತು ಭೂಪಾಳಿ, ಏಕನಾಥ ಷಷ್ಠಿ ಸ್ಥಾಪನೆ ಕುರಿತು ವಿವರಿಸಿದರು.
ದೇವಸ್ಥಾನದ ಅಧ್ಯಕ್ಷ ಮಾರುತಿ ಧರ್ಮಟ್ಟಿ, ಶಿವಗೊಂಡ ಧರ್ಮಟ್ಟಿ, ಗೋಪಾಲ ಧರ್ಮಟ್ಟಿ, ಪ್ರಧಾನಿ ಧರ್ಮಟ್ಟಿ, ಅನೀಲ ಚವ್ಹಾನ, ಜೋತೆಪ್ಪಾ ಉಮರಾಣಿ, ಗಜಪ್ಪ ಗಸ್ತಿ, ಸದಾಶಿವ ಧರ್ಮಟ್ಟಿ, ಬಿ.ಬಿ.ಮೋಕಾಶಿ, ಪ್ರಲ್ಹಾದ ಅರಕೇರಿ, ಮಾರುತಿ ದಳವಾಯಿ, ಮಹಾದೇವ ಗೌಡರ, ಬಾಬು ಕೆಳಗಡೆ, ಕುಮಾರ ಗುರವ ಪೂಜಾರಿ, ಮನ್ವಿತ ಅರಕೇರಿ, ಜ್ಞಾನೇಶ್ವರ ಧರ್ಮಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ ಮತ್ತು ಮಂತ್ರಪಠಣದಲ್ಲಿ ಪಾಲ್ಗೊಂಡಿದ್ದರು.
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ 