ಫೆ 6ರಿಂದ ಏಳನೇ ಆವೃತ್ತಿಯ ‘ಕೊಲ್ಕತಾ ಸಾಹಿತ್ಯೋತ್ಸವ’
ಕೊಲ್ಕತಾ, ಜ 28 ಏಳನೇ ಆವೃತ್ತಿಯ ‘ಕೊಲ್ಕತಾ ಸಾಹಿತ್ಯೋತ್ಸವ’ ಫೆ 6 ರಿಂದ8 ರವರೆಗೆ ಇಲ್ಲಿನ ಅಂತಾರಾಷ್ಟ್ರೀಯ ಕೋಲ್ಕತ ಪುಸ್ತಕ ಮೇಳ (ಐಕೆಬಿಎಫ್) ಆವರಣದಲ್ಲಿ ನಡೆಯಲಿದೆ.ಕವಿ ಸೌಮಿತ್ರ ಚಟ್ಟೋಪಾಧ್ಯಾಯ ಅವರು ಸಾಹಿತ್ಯೋತ್ಸವವನ್ನು ಉದ್ಘಾಟಿಸಿ ಮುಖ್ಯ ಭಾಷಣ ಮಾಡಲಿದ್ದಾರೆ. ಸೌಮಿತ್ರಾ ಬಾಬು ಅವರು ಸಣ್ಣ ಕೃತಿಗಳೊಂದಿಗೆ ದೊಡ್ಡ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ. ಸಣ್ಣ ಪತ್ರಿಕೆಯಾದ 'ಎಖಾನ್' ಸೇರಿದಂತೆ ಬಂಗಾಳಿ ಸಾಹಿತ್ಯದಲ್ಲಿ ಸಣ್ಣ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ ಎಂದು ಸಾಹಿತ್ಯೋತ್ಸವ ನಿರ್ದೇಶಕರಾದ ಸುಜಾತಾ ಸೇನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಳೆದ ವರ್ಷ ನ 7 ರಂದು ನಿಧನರಾದ ಲೇಖಕಿ ನಬನೀತಾ ದೇವ್ ಸೇನ್ ಸಾಹಿತ್ಯೋತ್ಸವದಲ್ಲಿ ಗೌರವ ಸಲ್ಲಿಸಲಾಗುವುದು. ಸಾಹಿತ್ಯೋತ್ಸವದಲ್ಲಿ ಪ್ರತಿವರ್ಷ ನಬನೀತಾ ದೇವ್ ಸೇನ್ ಸ್ಮಾರಕ ಉಪನ್ಯಾಸ ನಡೆಯುತ್ತಿದೆ. ಈ ವರ್ಷ ನಟ ಮತ್ತು ಮಕ್ಕಳ ಬರಹಗಾರ ನಂದನಾ ದೇವ್ ಸೇನ್ ಉಪನ್ಯಾಸ ನೀಡಲಿದ್ದಾರೆ ಎಂದು ಸುಜಾತಾ ಸೇನ್ ಹೇಳಿದರು. ಕೊಲ್ಕತಾ ಸಾಹಿತ್ಯೋತ್ಸವ ಏಳನೇ ಆವೃತ್ತಿಯಲ್ಲಿ ಹೆಚ್ಚಿನ ಸಂಖ್ಯೆಯ ವಿದೇಶಿ ಬರಹಗಾರರು ಸೇರಿದಂತೆ 5 ಕ್ಕೂ ಹೆಚ್ಚು ದೇಶಗಳ ಒಟ್ಟು 80 ಲೇಖಕರು ಭಾಗವಹಿಸಲಿದ್ದಾರೆ.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 