ಹುಬ್ಬಳ್ಳಿ - ತಿರುಪತಿ ರೈಲು ಪುನರ್ ಆರಂಭ
Hubli - Tirupati train restarted
ಹೊಸಪೇಟೆ 17: ಮಹಾ ಕುಂಭಮೇಳದ ನಿಮಿತ್ಯ ಪ್ರಯಾಗ್ರಾಜ್ಗೆ ತೆರಳಿದ್ದ ಹುಬ್ಬಳ್ಳಿ - ತಿರುಪತಿ ಗಾಡಿ ಸಂಖ್ಯೆ : 57401/57402, ಮೂರು ತಿಂಗಳ ನಂತರ ದಿ.17.03.2025 ಪುನರ್ ಆರಂಭಗೊಂಡಿದೆ.
ಈ ರೈಲು ಹಿಂದಿನ ವೇಳಾಪಟ್ಟಿಯಂತೆ ಹುಬ್ಬಳ್ಳಿಯಿಂದ ಬೆಳಿಗ್ಗೆ 6ಗಂಟೆಗೆ ನಿರ್ಗಮಿಸಿ ಗದಗ ಮಾರ್ಗವಾಗಿ ಹೊಸಪೇಟೆಗೆ ಬೆಳಿಗ್ಗೆ 9ಗಂಟೆಗೆ ಆಗಮಿಸುವುದು, ನಂತರ ಬಳ್ಳಾರಿ - ಕಡಪ ಮಾರ್ಗವಾಗಿ ರಾತ್ರಿ 10ಗಂಟೆಗೆ ತಿರುಪತಿಗೆ ತಲುಪುತ್ತದೆ. ಅದೇ ರೀತಿ ತಿರುಪತಿಯಿಂದ ಬೆಳಿಗ್ಗೆ 6ಗಂಟೆಗೆ ನಿರ್ಗಮಿಸಿ ಹೊಸಪೇಟೆಗೆ ಸಂಜೆ 5. 20ಕ್ಕೆ ಆಗಮಿಸಿ ಹುಬ್ಬಳ್ಳಿಯನ್ನು ರಾತ್ರಿ 9. 30ಕ್ಕೆ ತಲುಪುತ್ತದೆ. ಈ ರೈಲು ಪ್ಯಾಸೆಂಜರ್ ಆಗಿದ್ದು, ಟಿಕೆಟ್ ದರ ಹೀಗಿದೆ. ಹೊಸಪೇಟೆಯಿಂದ ಹುಬ್ಬಳ್ಳಿಗೆ ರೂ.35, ಬಳ್ಳಾರಿಗೆ ರೂ.20 (ಬಸ್ ದರ ರೂ.76), ಗುಂತಕಲ್ಗೆ ರೂ.35 ಹಾಗೂ ತಿರುಪತಿಗೆ ರೂ.85 ಆಗಿರುತ್ತದೆ. ಅತ್ಯಂತ ಕಡಿಮೆ ದರ ರಿಯಾಯಿತಿ ಸೌಲಭ್ಯವನ್ನು ಪ್ರಯಾಣಿಕರು ಸದ್ಬಳಕೆ ಮಾಡಿಕೊಳ್ಳಬೇಕು.
ಅದೇ ರೀತಿ ಮಹಾ ಕುಂಭಮೇಳದ ನಿಮಿತ್ತ ರದ್ದಾಗಿರುವ ಎಕ್ಸ್ಪ್ರೆಸ್ ರೈಲು ಬೆಳಗಾವಿ - ಹೊಸಪೇಟೆ - ಹೈದ್ರಬಾದ್ - ಮಣಗೂರು ಗಾಡಿ ಸಂಖ್ಯೆ : 07335/07336 ಇನ್ನೂ ಆರಂಭವಾಗಿಲ್ಲ. ಆದುದರಿಂದ ಸದರಿ ರೈಲನ್ನು ಕೂಡಲೇ ಪುನರಾರಂಭಿಸಬೇಕು.
ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಿಂದ ಇಲಾಖೆಗೆ ಅತ್ಯಧಿಕ ಆದಾಯವಿದೆ. ಆದುದರಿಂದ ಈ ಭಾಗದಲ್ಲಿ ಸಕಾಲದಲ್ಲಿ ನಿಗಧಿತ ವೇಳಾಪಟ್ಟಿಯಂತೆ ರೈಲುಗಳ ಸಂಚಾರ, ಹಾಗೂ ಪ್ರಯಾಣಿಕರಿಗೆ ಮೂಲಸೌಕರ್ಯಗಳನ್ನು ಕಲ್ಪಿಸಿಲು ಕ್ರಮ ಕೈಗೊಳ್ಳಬೇಕೆಂದು ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಆಗ್ರಹಿಸಿದೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 