ಹಿಮಾಚಲ ಪ್ರದೇಶದಲ್ಲಿ ಮಹಾ ಚಂಡಮಾರುತದಿಂದ ಮಂಜು, ಮಳೆ
ಶಿಮ್ಲಾ, ನ 7: ಮಹಾ ಚಂಡಮಾರುತ ಹಿಮಾಚಲ ಪ್ರದೇಶದ ಮೇಲೆ ಪ್ರಭಾವ ಬೀರುತ್ತಿದ್ದು, ರಾಜ್ಯದ 8 ಜಿಲ್ಲೆಗಳು ತೀವ್ರ ಮಂಜು ಇಲ್ಲವೇ ಮಳೆಯಿಂದ ಬಾಧಿತವಾಗಿವೆ. ಇದರಿಂದ ರಾಜ್ಯದಲ್ಲಿ ಪೂರ್ವ ಚಳಿಗಾಲದ ವಾತಾವರಣ ನಿರ್ಮಾಣವಾಗಿದೆ. ಆದರೆ, ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಸಜ್ಜಾಗಿರುವ ಇಲ್ಲಿನ ಧರ್ಮಶಾಲಾದಲ್ಲಿ ಮಾತ್ರ ಒಣ ಹವೆಯಿದೆ. ಇಲ್ಲಿ ನಡೆಯಲಿರುವ ಎರಡು ದಿನಗಳ ಸಮಾವೇಶವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿ, 200ಕ್ಕೂ ಹೆಚ್ಚು ವಿದೇಶಿ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಉಳಿದಂತೆ ಕಿಲೋಂಗ್ ಜಿಲ್ಲೆಯ ಲಹೌಲ್ ಸ್ಪಿತಿಯಲ್ಲಿ ಒಂದು ಸೆಂಟಿಮೀಟರ್ ಮಂಜು ಬಿದ್ದಿರುವುದು ದಾಖಲಾಗಿದೆ. ಮನಾಲಿಯ ಪ್ರವಾಸಿ ರೆಸಾರ್ಟ್ 11 ಮಿಮೀ, ಶಿಮ್ಲಾ 5.6 ಮಿಮೀ ಮಳೆಯಾಗಿದೆ. ರಾಜ್ಯದ ಪ್ರಸಕ್ತ ಹವೆಯನ್ನು ಜೋಳ, ಬಾರ್ಲ್, ಕಾಳುಗಳಂತಹ ಬೆಳೆಗಳಿಗೆ ಉತ್ತಮವಾಗಿವೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 