ಭಾರಿ ಮಳೆ: ಮನೆಗಳ ನೆಲಸಮ
ಲೋಕದರ್ಶನ ವರದಿ
ಬೈಲಹೊಂಗಲ: ಕಳೆದ 2-3 ದಿನಗಳಿಂದ ಸುರಿಯುತ್ತಿರುವ ಮಳೆಗೆ ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸುಮಾರು 168 ಕ್ಕೂ ಹೆಚ್ಚು ಮನೆಗಳ ಗೋಡೆಗಳು ಅಲ್ಪ-ಸ್ವಲ್ಪ ಬಿದ್ದ ವರದಿಯಾಗಿದೆ.
ಪಟ್ಟಣದ ಗೋಕಾವಿ ಗಲ್ಲಿಯಲ್ಲಿರುವ ಕೈರುನ್ನಿಸಾ ಫಕ್ರುಸಾಬ ಅತ್ತಾರ(70), ರಫೀಕ ಫಕ್ರುಸಾಬ ಅತ್ತಾರ(42), ಶಫೀಹ್ಮದ ಫಕ್ರುಸಾಬ ಅತ್ತಾರ(37) ಮನೆ ಛಾವಣಿ ಕುಸಿದು ನೆಲಕ್ಕುರುಳಿದೆ. ಮನೆ ಗೊಡೆ ಬಿರುಕು ಬಿಟ್ಟಿದ್ದನ್ನು ಅರಿತು ಕಳೆದ 4 ದಿನಗಳ ಹಿಂದೆ ಸಂಭಂದಿಕರ ಮನೆಯಲ್ಲಿ ವಾಸವಾಗಿದ್ದಾಗ ಈ ಘಟನೆ ಸಂಭವಿಸಿದೆ. ಒಂದು ವೇಳೆ ಮನೆಯಲ್ಲಿ ಆ ಕುಟುಂಬ ವಾಸವಾಗಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು.
ದೇವಲಾಪುರ ರಸ್ತೆಯ ಬಸವೇಶ್ವರ ಆಶ್ರಯ ಕಾಲೋನಿಯಲ್ಲಿ 3, ಬೇವಿನಕೊಪ್ಪ 6, ಅಮಟೂರ 8, ನಯಾನಗರ 3, ಆನಿಗೋಳ, ವಕ್ಕುಂದ, ಕೊರವಿನಕೊಪ್ಪ ಗ್ರಾಮಗಳಲ್ಲಿ ತಲಾ 9 ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆಗೆ ಗೋಡೆಗಳು ಕುಸಿದು ಬಿದ್ದಿವೆ. ಅಲ್ಲಲ್ಲಿ ಮನೆಗಳು ಸಂಪೂರ್ಣ ನೆಲಕಚ್ಚಿವೆ. ಹಾನಿಯಾದ ಸ್ಥಳಗಳಿಗೆ ತಹಸೀಲ್ದಾರ ಡಾ.ಡಿ.ಎಚ್.ಹೂಗಾರ, ಕಂದಾಯ ನೀರಿಕ್ಷಕ ಎಂ.ಬಿ.ಹಿರೇಮಠ, ಗ್ರಾಮಲೆಕ್ಕಾಧಿಕಾರಿ ಎಸ್.ಬಿ.ಮಠದ ಭೇಟಿ ನೀಡಿ ಪರಿಶೀಲಿಸಿದರು.
ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣದಿಂದ ವ್ಯಾಪಾರಸ್ಥರು ವ್ಯಾಪಾರಿಲ್ಲದೇ ಗ್ರಾಹಕರ ಬರುವಿಗಾಗಿ ದಾರಿ ನೋಡುವಂತಾಗಿತ್ತು. ಮದ್ಯಾಹ್ನ ಹೊತ್ತಿಗೆ ಬಿಸಿಲಿ ಬಿದ್ದಿದ್ದರಿಂದ ವ್ಯಾಪಾರಸ್ಥರು ನಿಟ್ಟುಸಿರು ಬಿಟ್ಟು ದೀಪಾವಳಿ ಹಬ್ಬದ ಭರ್ಜರಿ ವ್ಯಾಪಾರ ವಹಿವಾಟು ನಡೆಸಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 