ಸಮುಧಾಯ ಭವನ ನಿರ್ಮಾಣ ಕಾಮಗಾರಿಗೆ ಗುದ್ದಿಲಿ ಪೂಜೆ
Guddi Puja for the construction of the community hall
ಉಗರಗೋಳ 01: ಹಳ್ಳಿ ಹಳ್ಳಿಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಿಸುವುದರಿಂದ ಗ್ರಾಮಗಳ ಪ್ರತಿಯೊಂದು ಸಮಾಜದ ಜನರಿಗೆ ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿ ಮಂಗಳವಾರ 49.00 ಲಕ್ಷ ರೂ ವೆಚ್ಚದಲ್ಲಿ ಸಿಎಮ್ಆಯ್ಡಿಪಿ ಯೋಜನೆಯಡಿ, ಶ್ರೀಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಮುಧಾಯ ಭವನ ನಿರ್ಮಾಣ ಕಾಮಗಾರಿಗೆ ಗುದ್ದಿಲಿ ಪೂಜೆ ನೇರವೆರಿಸಿ ಮಾತನಾಡಿದ ಅವರು.
ಸಮುದಾಯ ಭವನಗಳು ಗ್ರಾಮೀಣ ಭಾಗದ ಜನರ ಅಗತ್ಯತೆ ಪೂರೈಸುತ್ತಿವೆ. ಈ ಕಾಮಗಾರಿ ಮುಗಿದ ಬಳಿಕ ಸಮುದಾಯ ಭವನವನ್ನು ಎಲ್ಲ ಸಮುದಾಯದವರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಯಲ್ಲಮ್ಮ ದೇವಸ್ಥಾನ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಸಿದ್ದನಗೌಡ ಗೂಡರಾಶಿ, ಯಲ್ಲಮ್ಮ ದೇವಸ್ಥಾನ ವೈವಸ್ಥಾಪನಾ ಸಮಿತಿ ಅಧ್ಯಕ್ಷ ರಾಮನಗೌಡ ತಿಪರಾಶಿ, ಮಂಜುನಾಥ ಕಾಳಪ್ಪನವರ, ನಿಂಗಪ್ಪ ಶಿದ್ದಕ್ಕನವರ, ನಿಂಗನಗೌಡ ಹರಳಕಟ್ಟಿ, ಹನಮಂತ ಶಿದ್ದಕ್ಕನವರ, ಶಿವನಗೌಡ ಮೇದಗೊಪ್ಪ, ಗೊವಿಂದಗೌಡ ತಿಪರಾಶಿ, ಬಸವರಾಜ ಗುಳೇದ, ನಿಂಗಪ್ಪ ಗೊವಪ್ಪನವರ, ಅಭಿಷಕ ತಿಪರಾಶಿ, ಮಾರುತಿ ಶಿಂಧೆ, ಪ್ರಲ್ಹಾದ ಕೆಳಗಡೆ, ನಾಗರಾಜ ಬಡೆಪ್ಪನವರ, ಬಸನಪ್ಪ ಅಳಗವಾಡಿ, ಪರಸಪ್ಪ ಇಮ್ರಾಪೂರ, ರಾಜೇಶ ಅಂಗಡಿ, ವಿಜಯ ನರಗುಂದ, ರಮೇಶ ಕರಿಕಟ್ಟಿ, ಸಂಜು ಚನ್ನಪ್ಪಗೌಡ್ರ, ಬಸು ರೂಗಿ ವೀರಭದ್ರ ಗುಳೇದ ಹಾಗೂ ಗ್ರಾಮಸ್ಥರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 