ಸಮುಧಾಯ ಭವನ ನಿರ್ಮಾಣ ಕಾಮಗಾರಿಗೆ ಗುದ್ದಿಲಿ ಪೂಜೆ
Guddi Puja for the construction of the community hall
ಉಗರಗೋಳ 01: ಹಳ್ಳಿ ಹಳ್ಳಿಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಿಸುವುದರಿಂದ ಗ್ರಾಮಗಳ ಪ್ರತಿಯೊಂದು ಸಮಾಜದ ಜನರಿಗೆ ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿ ಮಂಗಳವಾರ 49.00 ಲಕ್ಷ ರೂ ವೆಚ್ಚದಲ್ಲಿ ಸಿಎಮ್ಆಯ್ಡಿಪಿ ಯೋಜನೆಯಡಿ, ಶ್ರೀಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಮುಧಾಯ ಭವನ ನಿರ್ಮಾಣ ಕಾಮಗಾರಿಗೆ ಗುದ್ದಿಲಿ ಪೂಜೆ ನೇರವೆರಿಸಿ ಮಾತನಾಡಿದ ಅವರು.
ಸಮುದಾಯ ಭವನಗಳು ಗ್ರಾಮೀಣ ಭಾಗದ ಜನರ ಅಗತ್ಯತೆ ಪೂರೈಸುತ್ತಿವೆ. ಈ ಕಾಮಗಾರಿ ಮುಗಿದ ಬಳಿಕ ಸಮುದಾಯ ಭವನವನ್ನು ಎಲ್ಲ ಸಮುದಾಯದವರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಯಲ್ಲಮ್ಮ ದೇವಸ್ಥಾನ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಸಿದ್ದನಗೌಡ ಗೂಡರಾಶಿ, ಯಲ್ಲಮ್ಮ ದೇವಸ್ಥಾನ ವೈವಸ್ಥಾಪನಾ ಸಮಿತಿ ಅಧ್ಯಕ್ಷ ರಾಮನಗೌಡ ತಿಪರಾಶಿ, ಮಂಜುನಾಥ ಕಾಳಪ್ಪನವರ, ನಿಂಗಪ್ಪ ಶಿದ್ದಕ್ಕನವರ, ನಿಂಗನಗೌಡ ಹರಳಕಟ್ಟಿ, ಹನಮಂತ ಶಿದ್ದಕ್ಕನವರ, ಶಿವನಗೌಡ ಮೇದಗೊಪ್ಪ, ಗೊವಿಂದಗೌಡ ತಿಪರಾಶಿ, ಬಸವರಾಜ ಗುಳೇದ, ನಿಂಗಪ್ಪ ಗೊವಪ್ಪನವರ, ಅಭಿಷಕ ತಿಪರಾಶಿ, ಮಾರುತಿ ಶಿಂಧೆ, ಪ್ರಲ್ಹಾದ ಕೆಳಗಡೆ, ನಾಗರಾಜ ಬಡೆಪ್ಪನವರ, ಬಸನಪ್ಪ ಅಳಗವಾಡಿ, ಪರಸಪ್ಪ ಇಮ್ರಾಪೂರ, ರಾಜೇಶ ಅಂಗಡಿ, ವಿಜಯ ನರಗುಂದ, ರಮೇಶ ಕರಿಕಟ್ಟಿ, ಸಂಜು ಚನ್ನಪ್ಪಗೌಡ್ರ, ಬಸು ರೂಗಿ ವೀರಭದ್ರ ಗುಳೇದ ಹಾಗೂ ಗ್ರಾಮಸ್ಥರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 