ಅಥ್ಲೆಟಿಕ್ ಕೂಟ ಸಾಧನೆ ತೋರಿದ ಕ್ರೀಡಾಪಟುಗಳಿಗೆ ಚಿನ್ನದ ಪದಕ
ಲೊಕದರ್ಶನ ವರದಿ
ವಿಜಯಪುರ 07 : ನಗರದ ಬಿ.ಎಲ್.ಡಿ.ಇ ಸಂಗನಬಸವ ಮಹಾಸ್ವಾಮೀಜಿ ಫಾರ್ಮಸಿ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ 6ನೇ ಇಂಟರ್ ಸ್ಕೂಲ್ ಮತ್ತು ಕಾಲೇಜು ಅಥ್ಲೆಟಿಕ್ ಕೂಟ ಇತ್ತೀಚೆಗೆ ಜರುಗಿತು.
ನಗರದ ಖ್ಯಾತ ವೈದ್ಯರು, ಹಾಗೂ ಕ್ರೀಡಾಪಟುಗಳು ಆಗಿದ್ದ ದಿವಂಗತ ಡಾ.ಸಿ.ಆರ್.ಬಿದರಿಯವರ ಪುಣ್ಯಸ್ಮರಣೆಯ ನಿಮಿತ್ಯ ಆಯೋಜಿಸಿದ್ದ ಈ ಕ್ರೀಡಾಕೂಟವನ್ನು ಬಿ.ಎಲ್.ಡಿ.ಇ ನಿದರ್ೆಶಕ ಬಸನಗೌಡ ಎಂ.ಪಾಟೀಲ್ ಉದ್ಘಾಟಿಸಿದರು. ದೈಹಿಕ ಶಿಕ್ಷಣ ನಿದರ್ೆಶಕ ಎಸ್.ಎಸ್.ಕೋರಿ, ಡಾ.ಆರ್.ಸಿ.ಬಿದರಿ, ಡಾ.ಆರ್.ವಿ.ಕುಲಕಣರ್ಿ, ಡಾ.ಎನ್.ವಿ.ಕಲ್ಯಾಣಿ ಮುಖ್ಯ ಅತಿಥಿಯಾಗಿದ್ದರು. ಬಿ.ಎಲ್.ಡಿ.ಇ ವಿವಿಧ 50ಶಾಲೆ-ಕಾಲೇಜುಗಳ 550 ಕ್ರೀಡಾಪಟುಗಳು ಭಾಗವಹಿಸಿದ್ದರು.
ಸಂಜೆ ನಡೆದ ಬಹುಮಾನ ವಿತರಣೆಯಲ್ಲಿ ಉತ್ತಮ ಸಾಧನೆ ತೋರಿದ ಕ್ರೀಡಾಪಟುಗಳಾದ ಗೋಪಾಲ ಚವ್ಹಾಣ, ರೂಪಾಶ್ರೀ ಪಾಟೀಲ, ಗೀತಾ ತೋರತ, ಆನಂದ ನಾಯ್ಕ, ಕೀತರ್ಿ ತೋರತ, ಅಕ್ಷಯ ಬಡಿಗೇರ, ಸಂಜಯ ಜುಂಜರವಾಡ ಅವರಿಗೆ ಶ್ರೀಮತಿ ಆಶಾ ಎಂ.ಪಾಟೀಲ್, ಡಾ.ಶೈಲಜಾ ಬಿದರಿ, ರವಿ ಬಿದರಿ, ಐ.ಎಸ್.ಕಾಳಪ್ಪನವರ ಅವರು ಚಿನ್ನದ ಪದಕ ನೀಡಿ ಗೌರವಿಸಿದರು. ಆಡಳಿತಾಧಿಕಾರಿ ಎಸ್.ಎಚ್.ಲಗಳಿ, ಬಿ.ಆರ್.ಪಾಟೀಲ ವೇದಿಕೆಯ ಮೇಲಿದ್ದರು.
ಈ ಸಂದರ್ಭದಲ್ಲಿ ಏಷ್ಯನ್ ಗೇಮ್ಸ್ನಲ್ಲಿ ಸೈಕ್ಲಿಂಗ್ ವಿಭಾಗದಲ್ಲಿ ಸಾಧನೆ ತೋರಿದ ಮೇಘಾ ಗುಗಾಡ ಅವರನ್ನೂ ಸನ್ಮಾನಿಸಲಾಯಿತು.
ಅಂತರರಾಷ್ಟ್ರೀಯ ಭೌತಶಾಸ್ತ್ರ ಒಲಿಂಪಿಯಾಡ್ 2026ರಲ್ಲಿ ಚಿನ್ನದ ಪದಕಗಳ ಸಾಧನೆ ಮಾಡಿದ ಭಾರತೀಯ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ
ಶಾಸಕರ ಆಮಿಷ ಆರೋಪದ ಕಾನೂನು ನೋಟಿಸ್ ಬಳಿಕ ಬಿಜೆಪಿ ನ್ಯಾಯಾಲಯದ ಮೂಲಕ ರಾಜಕೀಯ ಹೋರಾಟ ನಡೆಸುತ್ತಿದೆ ಎಂದು ಒಮರ್ ಅಬ್ದುಲ್ಲಾ ಆರೋಪ
ಮಧುರೈ ಸಮೀಪ ಓಮ್ನಿ ಬಸ್–ಟಿಎನ್ಎಸ್ಟಿಸಿ ಬಸ್ ಮುಖಾಮುಖಿ ಡಿಕ್ಕಿ: ಐವರು ಸಾವು, 42 ಮಂದಿಗೆ ಗಾಯ
ಆರೋಪಿತ ರೌಡಿ ಶೀಟರ್ ಜನ್ಮದಿನಾಚರಣೆಯಲ್ಲಿ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಭಾಗಿ; ಕರ್ನಾಟಕದಲ್ಲಿ ರಾಜಕೀಯ ವಿವಾದ
ಮಾಹಿತಿ ಹಕ್ಕು ಕಾಯ್ದೆ ದುರ್ಬಲಕ್ಕೆ ಯತ್ನ: ಆಯುಕ್ತರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಕಾನೂನು ಹೋರಾಟ, ಗಾಡಾದ ಎಚ್ಚರಿಕೆ
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ 