ಜಿಟಿಜಿಟಿ ಮಳೆ: ಪಂಚಮಿ ಸಂಭ್ರಮಕ್ಕೆ ಅಡೆತಡೆ ಅಣ್ಣ ತಂಗಿಯರ ಅನುಬಂಧದ ನಾಗರ ಪಂಚಮಿ ಆಚರಣೆ
ಲೋಕದರ್ಶನವರದಿ
ರಾಣೇಬೆನ್ನೂರು: ಜಿಟಿಜಿಟಿಯ ಮಳೆಯಲ್ಲೂ ಹಾಗೂ ಬರಗಾಲ ಛಾಯೆಯಲ್ಲಿಯೂ ಸಹ ತಾಲೂಕಿನಾದ್ಯಂತ ನಾಗರ ಪಂಚಮಿ ಹಬ್ಬವನ್ನು ಬಹುತೇಕವಾಗಿ ಸಡಗರ ಸಂಭ್ರಮದ ಮಧ್ಯ ಸಂಪ್ರದಾಯಬದ್ದವಾಗಿ ಆಚರಿಸಲಾಯಿತು. ನಗರ ಸೇರಿದಂತೆ ಕೆಲವಡೆ ಸೋಮವಾರ ಮತ್ತು ರವಿವಾರ ದಿನದಂದು ನಾಗಪ್ಪನಿಗೆ ಹಾಲು ಎರೆದು ಮಹಿಳೆಯರು ಭಕ್ತಿಭಾವ ಮೆರೆದರು.
ನಚಿಗರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ನಾಗಪ್ಪನಿಗೆ ಹಾಲು ಎರೆಯುವದರ ಮೂಲಕ ಪೂಜೆ ಸಲ್ಲಿಸಿ. ಅಣ್ಣ-ತಂಗಿಯರು ಹಾಲು ಎರೆಯುವ ಸಂಪ್ರದಾಯ.
ಗಂಡನ ಮನೆಯಿಂದ ತವರು ಮನೆಗೆ ಹೆಣ್ಣು ಮಕ್ಕಳನ್ನು ಕರೆತಂದು ಅವರಿಗೆ ಹೊಸ ವಸ್ತ್ರಗಳನ್ನು ಉಡುಗೊರೆಯಾಗಿ ನೀಡಿ, ಮನೆ ಮಂದಿಯಲ್ಲ ನಾಗಪ್ಪನಿಗೆ ಹಾಲೆರೆದು ಸಂಭ್ರಮಿಸಿದರು.
ಕಲ್ಲು ಅಥವಾ ಮಣ್ಣಿನ ನಾಗಪ್ಪನಿಗೆ ಪೂಜೆ ಸಲ್ಲಿಸಿ ಶೇಂಗಾ, ಎಳ್ಳು, ಕಡಲಿ, ಹುರಳಿ, ತಂಬಿಟ್ಟು ಸೇರಿದಂತೆ ವಿವಿಧ ಬಗೆಯ ಉಂಡಿಗಳನ್ನು ನೈವೇದ್ಯ ಮಾಡಿ, ನಂತರ ಭೋಜನ ಸವಿದು ಜೋಕಾಲಿ ಜೀಕುವುದು ಎಲ್ಲಡೆ ಕಂಡು ಬಂದಿತು.
ದಿನವೀಡಿ ಬಂದ ತುಂತುರು ಮಳೆ ಹಾಗೂ ಆಗಾಗ್ಗೆ ಬರುತ್ತಿದ್ದ ಜೋರಾದ ಮಳೆಯಿಂದಾಗಿ ನಾಗರ ಪಂಚಮಿಗೆ ಸಂಭ್ರಮಕ್ಕೆ ಅಡತಡೆಯುಂಟಾಯಿತು
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 