ಉಜಾಲಾ ಮತ್ತು ಎಸ್ ಎಲ್ ಎನ್ ಪಿ ಉಪಕ್ರಮಗಳಿಗೆ ಐದು ವರ್ಷದ ಸಂಭ್ರಮ
ನವದೆಹಲಿ, ಜ 6, ದೇಶವನ್ನು ಬೆಳಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಉಜಾಲಾ ಯೋಜನೆ ಮತ್ತು ಬೀದಿ ದೀಪ ರಾಷ್ಟ್ರೀಯ ಕಾರ್ಯಕ್ರಮ (ಎಸ್ಎಲ್ಎನ್ಪಿ) ಭಾನುವಾರ ಐದು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಉಜಾಲಾ (ಕೈಗೆಟಕುವ ಎಲ್ ಇ ಡಿ ಮೂಲಕ ಉನ್ನತ ಜ್ಯೋತಿ) ಉಪಕ್ರಮದ ಮೂಲಕ ದೇಶಾದ್ಯಂತ 36.13 ಕೋಟಿಗೂ ಹೆಚ್ಚು ಎಲ್ಇಡಿ ಬಲ್ಬ್ ಗಳನ್ನು ವಿತರಿಸಲಾಗಿದೆ. ಇದರಿಂದಾಗಿ ವರ್ಷಕ್ಕೆ 46.92 ಶತಕೋಟಿ ಕಿಲೋವ್ಯಾಟ್ ಇಂಧನ ಉಳಿತಾಯ ಸಾಧ್ಯವಾಗಿದೆ. ಉಜಾಲಾ (ಉನ್ನತ ಜ್ಯೋತಿ ಬೈ ಅಫರ್ಡೆಬಲ್ ಎಲ್ ಇ ಡಿ ಸ್ ಫಾರ್ ಆಲ್) ಯೋಜನೆಯಿಂದ ಇಂಧನ ವಲಯದ ಮಾರುಕಟ್ಟೆ ಭಾರಿ ಪರಿವರ್ತನೆ ಕಂಡು ಬಂದಿದೆ. ಉಜಾಲಾ ಕಾರ್ಯಕ್ರಮದಡಿ ಎಲ್ಇಡಿ ಬಲ್ಬ್ ಗಳ ವಿತರಣೆಯಿಂದ ಅವುಗಳ ದರ ತಮ್ಮ ಮೂಲ ಬೆಲೆಗಿಂತ ಹತ್ತನೇ ಒಂದು ಭಾಗಕ್ಕೆ ಇಳಿದಿದೆ.
2015 ರಲ್ಲಿ 310 ರೂಪಾಯಿಯಿದ್ದ ಎಲ್ ಇ ಡಿ ಬಲ್ಬ್ ದರ 2018 ರಲ್ಲಿ 38 ರೂಪಾಯಿಗೆ ಇಳಿಕೆ ಕಂಡಿದೆ. ಅಸಮರ್ಥ ಪ್ರಕಾಶಮಾನ ಬಲ್ಬ್ ಗಳಿಂದ ಎಲ್ಇಡಿಗಳಿಗೆ ಬದಲಾಯಿಸುವುದರಿಂದ ಕುಟುಂಬಗಳ ವಿದ್ಯುತ್ ಬಿಲ್ ಕೂಡ ಕಡಿಮೆಯಾಗಲು ಸಾಧ್ಯವಾಗಿದೆ. ಈ ಮೂಲಕ ಕುಟುಂಬಗಳು ಕಡಿಮೆ ದರದಲ್ಲಿ ಪ್ರಕಾಶಮಾನ ಬೆಳಕು ಪಡೆಯಲು ಸಾಧ್ಯವಾಗಿದೆ.ಬೀದಿ ದೀಪ ರಾಷ್ಟ್ರೀಯ ಕಾರ್ಯಕ್ರಮದಡಿ ಇಲ್ಲಿಯವರೆಗೆ 1.03 ಕೋಟಿಗೂ ಹೆಚ್ಚು ಸ್ಮಾರ್ಟ್ ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ವರ್ಷಕ್ಕೆ 6.97 ಶತಕೋಟಿ ಕಿಲೋವ್ಯಾಟ್ ಇಂಧನ ಉಳಿತಾಯವಾಗಿದೆ.ಮೇಕ್ ಇನ್ ಇಂಡಿಯಾ ಉಪಕ್ರಮದಡಿ ದೇಶಾದ್ಯಂತ ಸುಮಾರು 13,000 ಉದ್ಯೋಗಗಳನ್ನು ಸೃಷ್ಟಿಸಲು ಸಹ ಈ ಎಲ್ ಇ ಡಿ ಬೀದಿ ದೀಪ ಅಳವಡಿಕೆ ಕ್ರಮದಿಂದ ಸಾಧ್ಯವಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 