ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಉಪಾಧ್ಯಕ್ಷರಿಗೆ ಸತ್ಕಾರ
Felicitation for President and Vice President of Sugar Factory
ವರದಿ: ಎಂ.ಬಿ. ಘಸ್ತಿ
ಸಂಕೇಶ್ವರ 20: ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಬಸವರಾಜ ಕಲ್ಲಟ್ಟಿ, ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ ಇವರು ಎಸ್.ಡಿ.ವ್ಹಿ.ಎಸ್. ಸಂಘದ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ಎ.ಬಿ. ಪಾಟೀಲರನ್ನು ಇವರು ಭೆಟ್ಟಿ ಮಾಡಿ ಕಾಯಕಯೋಗಿ ದಿ. ಬಸಗೌಡಾ ಅಪ್ಪಯ್ಯಗೌಡಾ ಪಾಟೀಲರ ಪ್ರತಿಮೆಗೆ ಹೂಮಾಲೆಯನ್ನು ಹಾಕಿದರು.
ಇದೇ ಸಂದರ್ಭದಲ್ಲಿ ಮಾಜಿ ಸಚಿವ ಎ.ಬಿ.ಪಾಟೀಲರು ದಿ. ಅಪ್ಪಣ್ಣಗೌಡಾ ಪಾಟೀಲ ಹುಟ್ಟು ಹಾಕಿದ ಕಾರ್ಖಾನೆಯನ್ನು ಸರಿಯಾಗಿ ಆಡಳಿತ ನಡೆಸಿ ದೇಶದಲ್ಲಿ ಹೆಸರುವಾಸಿ ಮಾಡಲು ತಾವು ಪ್ರಯತ್ನ ಮಾಡಬೇಕೆಂದು ಎ.ಬಿ.ಯವರು ಪದಾಧಿಕಾರಿಗಳಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಆರ್.ಬಿ. ಪಾಟೀಲ, ಶಿವನಾಯಕ ನಾಯಿಕ, ಸೋಮಶೇಖರ ಅರಬೋಳೆ ಉಪಸ್ಥಿತರಿದ್ದರು, ಇದರಂತೆಯೇ ಶಂಕರಲಿಂಗ ಕೋ-ಆಪ್ ಸೌಹಾರ್ದ ಕ್ರೆಡಿಟ ನಿಯಮಿತ ಸಂಘದ ಅಧ್ಯಕ್ಷ ಹಾಗೂ ಮರಾಠಾ ಸಮಾಜದ ಹಿರಿಯ ಮುಖಂಡ ಬಾಳಕೃಷ್ಣ ಹತನೂರೆ ಇವರ ಶೇಂಗಾ ಆಯಿಲ ಮೀಲಿಗೆ ಭೆಟ್ಟಿ ನೀಡಿದರು ಬಾಳಕೃಷ್ಣ ಶಂ. ಹತನೂರೆ ಇವರು ಈ ಕಾರ್ಖಾನೆಯನ್ನು ಸಧೃಢವಾಗಿ ಬೆಳೆಸಿ ಪುನಃ ಮೆರಗನ್ನು ತರಬೇಕೆಂದು ಎಲ್ಲ ಸಂಚಾಲಕ ಮಂಡಳಿಯವರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾಜಿ ಪುರಸಭೆಯ ಅಧ್ಯಕ್ಷ ಬಂಡು ಹತನೂರೆ, ಸುರೇಶ ಹುಂಚ್ಯಾಳಿ, ಡಾ: ಜಯಪ್ರಕಾಶ ಕರಜಗಿ, ಶಂಕರರಾವ ಹೆಗಡೆ, ಪವನ ಪಾಟೀಲ, ಅಣ್ಣಪ್ಪಾ ಸಂಗಾಯಿ, ಹಾಗೂ ಮುಂತಾದವರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 