ತೆರದ ಬಾವಿ, ಕೋಳವೆ ಬಾವಿ ನಿರಿನ ಪ್ರಮಾಣ ಕಡಿಮೆ ರೈತರ ಸಂಕಷ್ಟ
ಸಂಬರಗಿ,05: ಗಡಿ ಬಾಗದ ಗ್ರಾಮಗಳಲ್ಲಿ ಇರುವ ಅಗ್ರಾಣಿ ನದಿ ತುಂಬಿ ಹರಿತಾಯಿದೆ ಆದರೆ ತೆರದ ಬಾವಿ ಕೋಳವೆ ಬಾವಿ ನಿರಿನ ಪ್ರಮಾಣ ಕಡಿಮೆ ಇದ್ದ ಕಾರಣ ರೈತರ ಬೆಳೆ ಬತ್ತಿ ಹೋಗುತ್ತಿದೆ ಆ ಕಾರಣ ಅಗ್ರಾಣಿ ನದಿ ನಿರನ್ನು ಟ್ಯಾಂಕರ ಮೂಲಕ ರೈತರು ಬೆಳೆಗೆ ಬಿಡುತ್ತಿದ್ದಾರೆ ಆಗ್ರಾಣಿ ನದಿ ನಿರು ಕೇಲವೆ ಗ್ರಾಮಗಳಿಗೆ ಅನುಕೂಲ ವಾಗಿದು, ಉಳಿದ ಗ್ರಾಮಗಳಿಗೆ ಅನಾನುಕೂಲವಾಗಿದೆ.
ಗಡಿ ಬಾಗದ 30 ಗ್ರಾಮಗಳು ಸತತವಾಗಿ ಬರಗಾಲಕ್ಕೆ ತುತ್ತಾಗಿ ಸಿಲುಕಿದ್ದಾರೆ ಮಳೆ ಇದ್ದರೆ ಬೆಳೆ ಇಲ್ಲವಾದರೆ ರೈತರು ಕಂಗಾಲಾಗಿದ್ದಾರೆ. ರೈತರು ತಮ್ಮ ಗ್ರಾಮದಲ್ಲಿ ಸಂಘದಿಂದ ಬೆಳೆಸಾಲ ಪಡೆರುತ್ತಾರೆ ಬೆಳೆ ಬಂದರೆ ಸಾಲ ಮರುಪಾವತಿ ಮಾಡುತ್ತಾರೆ ಇಲ್ಲವಾದರೆ ಬೆರೆಯವರ ಕಡೆಯಿಂದ ಕೈಗಡ ಹಣ ಪಡೆದು ಸಾಲ ಮರುಪಾವತಿ ಮಾಡುತ್ತಾರೆ ಈ ಭಾಗದಲ್ಲಿ ಶಾಶ್ವತ ನಿರಾವರಿ ಇಲ್ಲದ ಕಾರಣ ರೈತರು ಮಳೆ ಆಧಾರಿತ ಬೆಳೆ ತಗೆಯಬೆಕಾಗುತ್ತದೆ ಸದ್ಯದಲ್ಲಿ ಮಳೆ ಪ್ರಮಾಣ ಕಡಿಮೆ ಇರುವ ಕಾರಣ ಗೂವಿನ ಜೋಳ ಹಾಗೂ ಇನ್ನಿತರ ಬೆಳೆ ಬತ್ತಿ ಹೋಗುತ್ತಿದೆ ಪ್ರಗತಿಪರ ರೈತರು ಅಗ್ರಾಣಿ ನದಿಇಂದ ಟ್ಯಾಂಕರ ಮೂಲಕ ನೀರು ತಂದು ಬೇಳೆ ಬದುಕುಸಿತ್ತಿದ್ದಾರೆ
ಜಂಬಗಿ ಸಂಬರಗಿ ಅರಳಟ್ಟಿ ಚಮಕೆರಿ ಬೊಮ್ಮನಾಳ ಜಕಾರಟ್ಟಿ ಮಧಬಾವಿ ಹನಮಾಪುರ ಸೆರಿದಂತೆ ಹಲವಾರು ಗ್ರಾಮಗಳಿಗೆ ತೆರೆದ ಬಾವಿಗೆ ಕಡಿಮೆ ನೀರು ಇದ್ದ ಕಾರಣ ಬೇಳೆಗೆ ನೀರು ಸಾಲುತ್ತಿಲ್ಲ. ಈ ಭಾಗದಲ್ಲಿ ಜನರಿಗೆ ಶಾಶ್ವತ ಪರಿಹಾರ ಗೋಳಿಸಿ ಬರಗಾಲ ಮುಕ್ತಮಾಡಬೇಕು.
ಪ್ರಗತಿಪರ ರೈತರು ಉದ್ದೋಗಪತಿ ಮಾಣಿಕ ಸುರ್ಯವಂಶ ಅವರನ್ನು ಸಂಪರ್ಕಿಸಿದಾಗ ಸುತ್ತಮುತ್ತಲ ಗ್ರಾಮದಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದು ನೀರಿನ ಅಭಾವದಿಂದ ಅಗ್ರಾಣಿ ನದಿಇಂದ ಟ್ಯಾಂಕರ ಮುಲಕ ನೀರು ತಂದು ಬೆಳೆಯನ್ನು ಬೆಳೆಯುತ್ತಿದ್ದಾರೆ ಸರಕಾರ ಗಡಿಬಾಗದ 30 ಗ್ರಾಮಗಳನ್ನು ಬರಗಾಲ ಘೋಷನೆ ಮಾಡಿದೆ ಆದರೆ ಸಾಲ ಮಣ್ಣಾ ಆಗಿಲ್ಲಾ ಸಾಲ ಮಣ್ಣಾ ಮಾಡಿ ಈ ಭಾಗದ ಶಾಶ್ವತ ನಿರಾವರಿ ಯೋಜನೆ ಜಾರಿಗೆ ತರಬೆಕೇಂದು ಅವರು ಸರಕಾರಕ್ಕೆ ಒತ್ತಾಯಿಸಿದ್ದಾರೆ.