ಪುರಸಭೆಗೆ ಅಧ್ಯಕ್ಷ ಹಾಗೂ ಉಪಾದ್ಯಕ್ಷರ ಆಯ್ಕೆ
Election of Chairman and Vice-Chairman for the Municipality
ಪುರಸಭೆಗೆ ಅಧ್ಯಕ್ಷ ಹಾಗೂ ಉಪಾದ್ಯಕ್ಷರ ಆಯ್ಕೆ
ಹೂವಿನಹಡಗಲಿ 20: ತೀವ್ರ ಕೂತಹಲ ಕೆರಳಿಸಿದ ಇಲ್ಲಿನ ಪುರಸಭೆ ಅದ್ಯಕ್ಷರಾಗಿ ಗಂಟಿ ಜಮಾಲ್ ಬಿ ಮತ್ತು ಉಪಾದ್ಯಕ್ಷರಾಗಿ ಸೊಪ್ಪಿನ ಮಂಜುನಾಥ ಅವಿರೋಧವಾಗಿ ಗುರುವಾರ ಆಯ್ಕೆಯಾದರು. ಇಲ್ಲಿನ ಪುರಸಭೆ ಕಚೇರಿಯಲ್ಲಿ ಅದ್ಯಕ್ಷ ಮತ್ತು ಉಪಾದ್ಯಕ್ಷರ ಚುನಾವಣೆಯಲ್ಲಿ ಒಂದೊಂದು ನಾಮಪತ್ರ ಸಲ್ಲಿಕೆಯಿಂದ ಅದ್ಯಕ್ಷರಾಗಿ ಗಂಟಿ ಜಮಾಲ್ ಬಿ .ಉಪಾದ್ಯಕ್ಷ ಸೊಪ್ಪಿನ ಮಂಜುನಾಥ ಅವರ ಅವಿರೋಧ ಆಯ್ಕೆಯನ್ನು ತಹಶೀಲ್ದಾರ ಸಂತೋಷ ಕುಮಾರ ಘೋಷಣೆ ಮಾಡಿದರು. ಅದ್ಯಕ್ಷ ಮತ್ತು ಉಪಾದ್ಯಕ್ಷರು ಮತ್ತು ಉಳಿದ ಕೆಲ ಸದಸ್ಯರುಕಾಂಗ್ರೆಸ್ ಪಕ್ಷವನ್ನು ತೊರೆದು ಶಾಸಕ ಕೃಷ್ಣನಾಯ್ಕ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರೆ್ಡಯಾದರು. ಪುರಸಭೆಯ 23 ಸ್ಥಾನಗಳಲ್ಲಿ 16 ಸದಸ್ಯರಿದ್ದರು. ಶಾಸಕ ಕೃಷ್ಣನಾಯ್ಕ ಸೇರಿದಂತೆ 17 ಜನರು ಬಿಜೆಪಿ ಬೆಂಬಲಿಸಿದ್ದರು. ಶಾಸಕ ಕೃಷನಾಯ್ಕ ಮಾತನಾಡಿ ಪುರಸಭೆ ಅಭಿವ್ರದ್ದಿ ಯಿಂದ ಕಾಂಗ್ರೆಸ್ ಸದಸ್ಯರು ಬಿಜೆಪಿಗೆ ಸೇರೆ್ಡಯಾಗಿದ್ದಾರೆ ಎಂದರು.ಬಿಜೆಪಿ ಅದ್ಯಕ್ಷ ಮಲ್ಲಿಕಾರ್ಜುನ. ವಕೀಲ ಎಂ.ಪರಮೇಶ್ವರ್ಪ.ವಾರದಗೌಸ ಮೊಹಿದ್ದೀನ್ ನೂತನ ಅದಕ್ಷ.ಉಪಾದ್ಯಕ್ಷರನ್ನು ಅಭಿನಂದಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 