ಎಡಾಮೊನ್ -ಕೊಚ್ಚಿ ವಿದ್ಯುತ್ ಪ್ರಸರಣ ಮಾರ್ಗ: ಸಿಎಂ ರಿಂದ ಉದ್ಘಾಟನೆ
ತಿರುವನಂತಪುರಂ, ನವೆಂಬರ್ 19 : ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎಡಾಮೊನ್-ಕೊಚ್ಚಿ ವಿದ್ಯುತ್ ಮಾರ್ಗ ಉದ್ಘಾಟಿಸಿದ್ದು,ಇದರ ಪರಿಣಾಮ ರಾಜ್ಯವು ತನ್ನ 400 ಕೆವಿ ಪ್ರಸರಣ ಜಾಲದ ಮೂಲಕ ದೇಶದ ಯಾವುದೇ ಭಾಗದಿಂದ ವಿದ್ಯುತ್ ಪಡೆಯಲು ಸಾಧ್ಯವಾಗಲಿದೆ. ನಂತರ ಮಾತನಾಡಿದ ಮುಖ್ಯಮಂತ್ರಿ, ಪವರ್ಗ್ರಿಡ್ ಕಾರ್ಪೋರೇಶನ್ನಿಂದ ಪೂರ್ಣಗೊಂಡ ಈ ಯೋಜನೆ ಪ್ರಸರಣ ನಷ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದರು. 400 ಕೆವಿ ವಿದ್ಯುತ್ ಪ್ರಸರಣ ಜಾಲವು ರಾಜ್ಯದ ವಿದ್ಯುತ್ ಆಮದು ಸಾಮಥ್ರ್ಯವನ್ನು 800 ಮೆಗಾವ್ಯಾಟ್ ಹೆಚ್ಚಿಸಿದೆ ಎಂದು ಮೂಲಗಳು ತಿಳಿಸಿವೆ. 148 ಕಿ.ಮೀ ಎಡಾಮೋನ್-ಕೊಚ್ಚಿ ಮಾರ್ಗವು 447 ಗೋಪುರಗಳನ್ನು ಹೊಂದಿದ್ದು ಕೊಲ್ಲಂ (22 ಕಿ.ಮೀ), ಪಥನಮತ್ತಟ್ಟ (47 ಕಿ.ಮೀ), ಕೊಟ್ಟಾಯಂ (51 ಕಿ.ಮೀ), ಮತ್ತು ಎರ್ನಾಕುಲಂ (28 ಕಿ.ಮೀ) ಮೂಲಕ ಹಾದುಹೋಗುತ್ತದೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 