ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ತಕ್ಷಣ ಪಿಪಿಇ ಕಿಟ್ ಒದಗಿಸಲು ಡಾ.ಅಶ್ವತ್ಥನಾರಾಯಣ ಸೂಚನೆ
ಬೆಂಗಳೂರು, ಏ.2 ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರು ಮತ್ತು ಶಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ಸಿಬ್ಬಂದಿಗಳಿಗೆ ತ್ವರಿತವಾಗಿ ಪಿ.ಪಿ.ಇ ಒದಗಿಸುವಂತೆ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್ಥನಾರಾಯಣ್ ಐಎಎಸ್ ಅಧಿಕಾರಿ ಮಂಜುಶ್ರಿ ಅವರಿಗೆ ಸೂಚನೆ ನೀಡಿದ್ದಾರೆ.ಕೊರೋನಾ ಸೋಂಕಿತರು ಹಾಗೂ ಶಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ವೈಯಕ್ತಿಕ ಸುರಕ್ಷತಾ ಉಪಕರಣಗಳು ಸಮರ್ಪಕವಾಗಿ ಒದಗಿಸದೇ ಇರುವುದರಿಂದ ಅವರಿಗೂ ಕೊರೋನಾ ವೈರಸ್ ತಗಲುವ ಆತಂಕದ ಬಗ್ಗೆ ವರದಿಯಾಗಿತ್ತು.
ಈ ವರದಿಯನ್ನು ಅಧಿಕಾರಿಗಳು ಉಪಮುಖ್ಯಮಂತ್ರಿ ಅಶ್ವಥ್ಥನಾರಾಯಣ್ ಅವರ ಗಮನಕ್ಕೆ ತಂದಾಗ ತಕ್ಷಣವೇ ಲಾಗಿಸ್ಟಿಕ್ ವಿಭಾಗದ ಪ್ರಮುಖರೂ ಆಗಿರುವ ಐಎಎಸ್ ಅಧಿಕಾರಿ ಮಂಜುಶ್ರೀ ಅವರೊಂದಿಗೆ ಮಾತುಕತೆ ನಡೆಸಿದರು.ಮೈಸೂರು ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಕೊರೋನಾ ಸೋಂಕಿತರು ಹಾಗೂ ಶಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಪಿ.ಪಿ.ಇ ಕಿಟ್ ಸಮರ್ಪಕವಾಗಿ ಸರಬರಾಜಾಗದಿರುವ ಕುರಿತು ಅಶ್ವಥ್ಥನಾರಾಯಣ್ ಅವರು ವಿವರಿಸಿದ್ದಲ್ಲದೆ,ಈ ಕೊರತೆಯನ್ನು ಪರಿಹರಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ರಾಜ್ಯದ ಯಾವ್ಯಾವ ಭಾಗಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಪಿ.ಪಿ.ಇ ಕಿಟ್ ಲಭ್ಯವಾಗಿಲ್ಲ ಎಂಬುದರ ವಿವರ ಪಡೆಯಿರಿ. ಕೊರತೆ ಇದ್ದ ಕಡೆ ತಕ್ಷಣವೇ ಈ ಕಿಟ್ಗಳನ್ನು ಸರಬರಾಜು ಮಾಡಿ ಉಪಮುಖ್ಯಮಂತ್ರಿಗಳು ಸೂಚಿಸಿದರು.ಕೊರೋನಾ ಸೋಂಕಿತರು ಹಾಗೂ ಶಂಕಿತರಿಗೆ ಚಿಕಿತ್ಸೆ ನೀಡುವವರಿಗೆ ಗೌನು, ಗ್ಲೌಸು, ಮಾಸ್ಕ್ ಸೇರಿದಂತೆ ಹಲವು ಸವಲತ್ತುಗಳನ್ನು ಒದಗಿಸುವ ಕಿಟ್ ಸಕಾಲಕ್ಕೆ ಸಿಕ್ಕದೆ ಹೋದರೆ ಅವರಿಗೇ ಸೋಂಕು ತಗಲುವ ಅಪಾಯದ ಕುರಿತು ಮಾಧ್ಯಮ ವರದಿ ಮಾಡಿತ್ತು. ಪಿಪಿಇ ಕಿಟ್ಗಳ ತಯಾರಿಕೆ ಕಾರ್ಯ ನಡೆದಿರುವ ಕುರಿತು ಐಎಎಸ್ ಅಧಿಕಾರಿ ಮಂಜುಶ್ರೀಯವರು ಉಪಮುಖ್ಯಮಂತ್ರಿಗಳಿಗೆ ವಿವರ ನೀಡಿದ್ದಲ್ಲದೆ ಕೊರತೆ ಇರುವ ಕಡೆ ತಕ್ಷಣವೇ ಈ ಕಿಟ್ಗಳನ್ನು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ 