ದೆಹಲಿ: ರಸ್ತೆ ಅಪಘಾತಗಳ ಸಾವಿನ ರಾಜಧಾನಿ...!!!
ನವದೆಹಲಿ, ನ 4: ರಾಷ್ಟ್ರ ರಾಜಧಾನಿ ಕೇವಲ ವಾಯು ಮಾಲಿನ್ಯದಿಂದ ಮಾತ್ರ ಅಪಾಯ ಎದುರಿಸುತ್ತಿಲ್ಲ ಬದಲಾಗಿ ರಸ್ತೆ ಅಪಘಾತಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗಿ ಅಮಾಯಕರು ಸಾವಿಗೆ ತುತ್ತಾಗುತ್ತಿದ್ದಾರೆ. ರಸ್ತೆ ಅಪಘಾತಗಳಿಂದಾದ ಸಾವಿನ ಸಂಖ್ಯೆ 2018ರಲ್ಲೂ ಏರಿಕೆಯಾಗುತ್ತಿದ್ದು ರಸ್ತೆ ಅಪಘಾತ ದಿಂದಾಗುವ ಸಾವಿನ ರಾಜಧಾನಿ ಎಂಬ ಅಪಖ್ಯಾತಿಗೂ ಒಳಗಾಗುತ್ತಿದೆ. 2017ಕ್ಕೆ ಹೋಲಿಸಿದರೆ ರಸ್ತೆ ಅಪಘಾತಗಳಲ್ಲಿ ಮೃತಪಟ್ಟವರ ಸಂಖ್ಯೆ 106ರಷ್ಟು ಹೆಚ್ಚಿದೆ. ಉಳಿದಂತೆ ಕೊಲ್ಕತ್ತಾ, ಚೆನ್ನೈ ಮತ್ತು ಮುಂಬೈನಲ್ಲಿ ರಸ್ತೆ ಅಪಘಾತದಿಂದ ಆಗುತ್ತಿರುವ ಸಾವಿನ ಪ್ರಮಾಣದಲ್ಲಿ ಕೊಂಚ ಇಳಿಕೆಯಾಗಿದೆ. 2017ರಲ್ಲಿ ಚೆನ್ನೈನಲ್ಲಿ 1299 ಮಂದಿ ರಸ್ತೆ ಅಪಘಾತಗಳಲ್ಲಿ ಅಸು ನೀಗಿದ್ದಾರೆ , ಆದರೆ 2018 ರಲ್ಲಿ ಈ ಪ್ರಮಾಣ 1260ಕ್ಕೆ ಇಳಿದಿದೆ. ಕೊಲ್ಕತ್ತಾದಲ್ಲಿ 2017ರಲ್ಲಿ 329 ಮತ್ತು 2018ರಲ್ಲಿ 294 ರಸ್ತೆ ಅಪಘಾತ ಸಾವುಗಳು ಸಂಭವಿಸಿದೆ. ಮುಂಬೈನಲ್ಲೂ ಹಿಂದಿನ ವರ್ಷಕ್ಕೆ ಹೋಲಿಸಿದರೆ 15 ಕಡಿಮೆ ಸಾವು ಸಂಭವಿಸಿದ್ದು, ಒಟ್ಟು 475 ಮಂದಿ ಮೃತಪಟ್ಟಿದ್ದಾರೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 