ಬಳ್ಳಾರಿ: ಕನ್ಯಕಪರಮೇಶ್ವರಿ ದೇವಿಗೆ 5ಕೆ.ಜಿ ಬಂಗಾರದ ಸೀರೆ ಅರ್ಪಣೆ
ಲೋಕದರ್ಶನ ವರದಿ
ಬಳ್ಳಾರಿ 05: ನಗರದ ಬೆಂಗಳೂರು ರಸ್ತೆಯಲ್ಲಿರುವ ಶ್ರೀ ಕನ್ಯಕಪರಮೇಶ್ವರಿ ದೇವಸ್ಥಾನಕ್ಕೆ ನೂರು ವರ್ಷಗಳು ಪೂರೈಸಿದ್ದು ಇದರ ಪ್ರಯುಕ್ತ ನಾಲ್ಕು ದಿನಗಳ ಕಾಲ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದರ ಪ್ರಯುಕ್ತ ಬುಧವಾರ ಭಕ್ತಾಧಿಗಳು ಸಲ್ಲಿಸಿದ ದೇಣಿಗೆ ರೂಪದ ಬಂಗಾರದಿಂದ ಶ್ರೀ ಕನ್ಯಕಪರಮೇಶ್ವರಿ ದೇವಿಯ ವಿಗ್ರಹಕ್ಕೆ 5 ಕೆ.ಜಿ ಬಂಗಾರದಿಂದ ನಿರ್ಮಿಸಿರುವ ಬಂಗಾರದ ಸೀರೆ (ಕವಚ) ಕಳಸ ಸ್ಥಾಪನೆ ಮಾಡಲಾಯಿತು.
ಈ ವಿಶೇಷ ಕಾರ್ಯಕ್ರಮಕ್ಕೆ ಬೇಟಿ ನೀಡಿದ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಮ್ಮ ಧರ್ಮಪತ್ನಿಯೊಂದಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದಲ್ಲಿ ನಡೆದ ಪಂಚಗವ್ಯಾ ಹೋಮ ಕಾರ್ಯಕ್ರಮವನ್ನು ವಿಕ್ಷಿಸಿ ಪೂರ್ಣಹುತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮದ್ಯಾಹ್ನ 2:30ಕ್ಕೆ ಐದು ಜನ ಬ್ರಹ್ಮಾಣ ಮುತ್ತೈದೆಯರಿಗೆ ಮಡಿಲಕ್ಕಿ ತುಂಬುವ ಕಾರ್ಯಕ್ರಮವನ್ನು ರೂಪಿಸಿದ್ದರು. ನಂತರ ಪ್ರಸಾಧ ವಿನಿಯೋಗ ಕಾರ್ಯಕ್ರಮ ನಡೆಯಿತು. ಸಂಜೆ 6 ಗಂಟೆಗೆ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿದ್ದು, 7 ಗಂಟೆಗೆ ಮಾಜಿ ಧರ್ಮಕರ್ತರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಅದೇರೀತಿ ಗುರುವಾರ ಕುಂಭಾಭಿಷೇಕಕ್ಕೆ ಪ್ರಧಾನ ಕಳಸಕ್ಕೆ ಬೆಳ್ಳಿ ಕಳಸ ಸ್ಥಾಪನೆ ಮತ್ತು 102ರಿಂದ 250 ಕಳಸ ಪ್ರತಿಷ್ಟಾಪನೆ, ಹೋಮ ಪೂಣರ್ಾಹುತಿ ಕಾರ್ಯಕ್ರಮ, ಕೈಗೊಳ್ಳಲಿದ್ದಾರೆ. ನಂತರ ಕೊನೆಯ ದಿನವಾದ ಪೆಬ್ರವರಿ 07 ಶುಕ್ರವಾರ ಬೆಳಗ್ಗೆ 6:30ಕ್ಕೆ ಸಾದ್ವಿ ಕಾಮಕ್ಷಮ್ಮ ಮಾತಾಜೀ ಅವರ ಸಮ್ಮೂಖದಲ್ಲಿ ಮಹಾ ಕುಂಭಾಭಿಷೇಕ, ಶಾಂತಿ ಹೋಮ, ಕನ್ಯಕೆಯರ ಪೂಜೆ, ತುಲಾಭಾರ ಸೇವೆ, ನಂತರ ಮಹಾಮಂಗಳಾರತಿ ಜೊತೆಗೆ ಬೋಜನ ವ್ಯವಸ್ಥೆ ಮಾಡಲಾಗಿದೆ. ನಂತರ ಸಾಯಂಕಾಲ 5 ಗಂಟೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಶ್ರೀ ಕನ್ಯಕಪರಮೇಶ್ವರಿ ದೇವಿಯ ಭವ್ಯ ಮೆರವಣಿಗೆ ಮಾಡುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ ಎಂದಿದ್ದಾರೆ, ಈ ಎಲ್ಲಾ ಕಾರ್ಯಕ್ರಮದ ಮಾಹಿತಿಯನ್ನು ದೇವಸ್ಥಾನದ ಧರ್ಮಕರ್ತರು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಬೈರಾಪುರ ನಾರಾಯಣ ಶೆಟ್ಟಿ, ಗೋವಿಂದಯ್ಯ ಶೆಟ್ಟಿ, ಗಾಂದ್ಯಮ್ ಗೋಪಾಲಕೃಷ್ಣ, ಸೋಂತ ಗಿರಿಧರ ಸೇರಿದಂತೆ ಇನ್ನೂ ಹಲವಾರು ಸದಸ್ಯರು ಮಾಹಿತಿ ನೀಡಿದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 