ಭಾರತ ಬಂದ್ ಸಹಜ ಸ್ಥಿತಿಯಲ್ಲಿ ಬಸವನಬಾಗೇವಾಡಿ ಪಟ್ಟಣ: ರಸ್ತೆಗಿಳಿಯದ ಸರಕಾರಿ ಬಸ್
ಲೋಕದರ್ಶನ ವರದಿ
ಬಸವನಬಾಗೇವಾಡಿ: ಕಾಂಗ್ರೆಸ್ ನೇತೃತ್ವದ ಮಿತ್ರಪಕ್ಷಗಳು ಕರೆ ನೀಡಿದ ಭಾರತ ಬಂದ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಟಿಪ್ಪು ಕ್ರಾಂತಿ ಸೇನೆ ಸಂಘಟನೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ್ದನ್ನು ಹೊರತುಪಡಿಸಿದಂತೆ ಪಟ್ಟಣವು ಸೋಮವಾರ ಸಹಜ ಸ್ಥಿತಿಯಲ್ಲಿ ವಾರದ ಸಂತೆಯು ನಡೆಯಿತು.
ಸೋಮವಾರ ಎಂದಿನಂತೆ ವಾರದ ಸಂತೆಗೆ ಗ್ರಾಮೀಣ ಭಾಗದ ಜನತೆ ಪಟ್ಟಣಕ್ಕೆ ಖಾಸಗೀ ವಾಹನ-ಬೈಕ್ ಮುಖಾಂತರ ಸಂತೆಕಟ್ಟೆಗೆ ಆಗಮಿಸಿದರೇ ಅಂಗಡಿ-ಮುಗ್ಗಟ್ಟುಗಳು ಸಹಜಸ್ಥಿತಿಯಲ್ಲಿ ಎಂದಿನಂತೆ ವ್ಯಾಪಾರವಹಿವಾಟಿನಲ್ಲಿ ತಲ್ಲೀನವಾಗಿದ್ದು ಕಂಡು ಬಂತು, ಭಾರತ ಬಂದ್ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಸಾರಿಗೆ ಸಂಸ್ಥೆಯ ಬಸ್ಗಳು ರಸ್ತೆಗಿಳಿಯದೇ ದೂರುಳಿದು ಪ್ರಯಾಣಿಕರಿಗೆ ಹಾಗೂ ಜನತೆಗೆ ಓಡಾಟಕ್ಕೆ ಸ್ವಲ್ಪ ತೊಂದರೆ ಅನುಭವಿಸುವಂತಾಯಿತು.
ಬಸ್ ಸಂಚಾರ ಸ್ಥಗೀತವಾದ ಕಾರಣದಿಂದ ಪ್ರಯಾಣಿಕರು ಖಾಸಗೀ ವಾಹನಗಳ ಓಡಾಟ ಅನಿವಾರ್ಯವಾಗಿದ್ದರಿಂದ ಪ್ರಯಾಣಿಕರು ದುಬಾರಿ ಬೆಲೆ ತೆತ್ತು ಪ್ರಯಾಣಿಸಬೇಕಾಯಿತು, ಬಸ್ ಸಂಚಾರ ನಂಬಿ ಬಂದ ಕೇಲ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಧ್ವನಿವರ್ಧಕದಲ್ಲಿ ಜಾಹೀರಾತು ಹಾಗೂ ಎಫ್ಎಂ ರೇಡಿಯೋ ಕಾರ್ಯಕ್ರಮಗಳು ಪ್ರಸಾರವಾಗುತ್ತಿರುವದನ್ನು ನಂಬಿ ಬಸ್ಗಾಗಿ ಕಾಯ್ದು ಕುಳಿತು ನಂತರ ಸಿಬ್ಬಂದಿ ವಿಚಾರಿಸಿ ಬಂದ ದಾರಿಗೆ ಸುಂಕವಿಲ್ಲ ಎಂದು ಮರಳಿದ್ದು ಕಂಡು ಬಂತು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 