ಭಾರತೀಯ ಸಂಸ್ಕೃತಿಯನ್ನು ಬೆಂಬಲಿಸುವುದೇ ಭಾಜಪ: ಗೋವಿಂದ ಕಾರಜೋಳ

ರನ್ನ ಬೆಳಗಲಿ 07:  ಪಟ್ಟಣದಲ್ಲಿರುವ  ಚಕ್ರಪುರವಾಸಿನಿ ಚಕ್ರೇಶ್ವರಿ ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ ಅವರು ಭಾರತೀಯ ಸಂಸ್ಕೃತಿಯನ್ನು ಬೆಂಬಲಿಸುವುದೇ ಭಾಜಪ ಪಕ್ಷ ಮಾತ್ರ ಎಂದು ಹೇಳುವುದರ ಜೊತೆಗೆ ಮಾನ್ಯ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ನರೇಂದ್ರ ಮೋದೀಜೀ ನವರಾತ್ರಿಯ ಧಾರ್ಮಿಕ ಆಚರಣೆ ಮಾಡುತ್ತ ರಾಷ್ಟ್ರಕ್ಕೆ ಮಹಾಶಕ್ತಿ ಯಿಂದ  ಆಶೀರ್ವಾದ ಪಡೆಯುತ್ತಾರೆ. ಭಾರತ ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ನಿಂತಿದೆ ಆದ್ದರಿಂದಲೇ ವಿಶ್ವ ಗುರುವಾಗುತ್ತಿದೆ. ಪ್ರತಿಯೊಬ್ಬರೂ ನಮ್ಮ ಪರಂಪರೆಯನ್ನು ಸಂಸ್ಕೃತಿಯನ್ನು ಧಾರ್ಮಿಕ ಕಾರ್ಯಕ್ರಮಗಳನ್ನು ಉಳಿಸಿಕೊಂಡು ಬೆಳೆಸಿಕೊಂಡು ಬರುವುದರಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ತಿಳಿಸಿದರು.   

ಮಠದ ಡಾ. ಚಿದಾನಂದ ಮಹಾರಾಜರು (ರಮೇಶ ಕುಮಾರ ರಾವಳ)  ಮಠಕ್ಕೆ ಆಗಮಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಚಿತ್ರದುರ್ಗ ಜಿಲ್ಲೆಯ ಸಂಸದರಾದ ಗೋವಿಂದ.ಎಮ್‌.ಕಾರಜೋಳ ರವರಿಗೆ ಕಾಳಿಕಾ ಭುವನೇಶ್ವರಿ ದೇವಿಯ ಭವ್ಯ ಭಾವಚಿತ್ರ ನೀಡುವುದರ ಜೊತೆಗೆ ಆಶೀರ್ವದಿಸಿ, ಗೌರವಿಸಿ ಸತ್ಕರಿಸಿದರು.  

ವಾಸ್ತು ಜ್ಯೋತಿಷ್ಯ ತಜ್ಞರಾದ ದುಂಡಪ್ಪ ರಾವಳ, ಮಾನಿಂಗಪ್ಪ ರಾವಳ, ಭಾಜಪ ಮುಖಂಡರಾದ ಗಣೇಶ ಪೂಜಾರಿ,ಶಿವನಗೌಡ ಪಾಟೀಲ, ಸ್ಥಳೀಯರಾದ ಮಹಾದೇವ ನೆಸೂರು, ಸದಪ್ಪ ನೇಸೂರ, ಮಲ್ಲು ನೇಸೂರ ಮುಂತಾದವರು ಪಾಲ್ಗೊಂಡಿದ್ದರು.