ಕೊರೋನಾ ಬಗ್ಗೆ ಪೊಲೀಸರಿಂದ ಜಾಗೃತಿ

ಹಾವೇರಿ, ಏ.19,ಜಾಗತಿಕವಾಗಿ ಬಾಧಿಸುತ್ತಿರುವ ಕೋವಿಡ್-19 ಸೋಂಕಿನ ವಿರುದ್ಧ  ಹೋರಾಡುತ್ತಿರುವ ಪೊಲೀಸರು ಕೊರೊನಾ ವಾರಿಯರ್ಸ್ ನಂತೆ ಹಗಲಿರುಳು ದುಡಿಯುತ್ತಿದ್ದಾರೆ. ಇಂತಹ ಕೊರೊನಾ ವಾರಿಯರ್ಸ್ ಪೊಲೀಸರಿಂದು ಹಿರೇಕೆರೂರು, ಹಂಸಬಾವಿ ಸೇರಿದಂತೆ ವಿವಿಧೆಡೆ  ವಾಹನದ ಮೂಲಕ ರಾಲಿ ನಡೆಸಿ ಕೊರೊನಾ ಕುರಿತು ಜಾಗೃತಿ ಮೂಡಿಸಿದರು. ಪೊಲೀಸರ ಈ ಸೇವೆಗೆ ಹಿರೇಕೆರೂರು ಮತಕ್ಷೇತ್ರದ ಶಾಸಕರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ವಂದನೆ‌  ಸಲ್ಲಿಸಿ  ಪೊಲೀಸರ ಕರ್ತವ್ಯ ಸೇವೆಯನ್ನು ಶ್ಲಾಘಿಸಿದರು.ಜಾಗೃತಿ  ಜಾಥಾದಲ್ಲಿ ಡಿವೈಎಸ್‌ಪಿ ಟಿ.ಸುರೇಶ್, ಎಸ್ಪಿ ಕೆ.ಜೆ.ದೇವರಾಜ್ ಎ‌ಎಸ್ಪಿ ಮಲ್ಲಿಕಾರ್ಜುನ್  ಸೇರಿದಂತೆ ಪಿಎಸ್‌ಐ ಸಿಪಿಐ , ಇತರೆ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು‌.ಈ ಸಂದರ್ಭದಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ್ ಕೃಷಿ ಸಚಿವರಿಗೆ ಸಾಥ್ ನೀಡಿದರು.