ಅಲಿಘರ್ ನಲ್ಲಿ ವಿಮಾನ ಅಪಘಾತ: 6 ಜನ ಪಾರು
ಅಲಿಘರ್, ಆಗಸ್ಟ್ 27 ಧನಿಪುರ ಬಳಿ ಮಂಗಳವಾರ ವಿಮಾನ ಅಪಘಾತ ಸಂಭವಿಸಿ ಇಬ್ಬರು ಪೈಲಟ್ಗಳು ಸೇರಿದಂತೆ ಆರು ಮಂದಿ ಪವಾಡ ಸದೃಶ ರೀತಿಯಲ್ಲಿ ಪ್ರಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ವಿಟಿ-ಎವಿವಿ ವಿಮಾನ ವಾಯುನೆಲೆಯಲ್ಲಿ ಇಳಿಯುವಾಗ ವಿದ್ಯುತ್ ತಂತಿಗೆ ಡಿಕ್ಕಿ ಬಡಿದಿದೆ ಎಂದು ವರದಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿಸಿದರೂ ಬೆಂಕಿ ಇಡೀ ವಿಮಾನಕ್ಕೆ ವ್ಯಾಪಿಸಿ ಆಹುತಿಯಾಯಿತು. ನವದೆಹಲಿಯಿಂದ ಬರುತ್ತಿದ್ದ ವಿಮಾನ ವಾಯುನೆಲೆಯಲ್ಲಿ ಇಳಿಯುವಾಗ ವಿದ್ಯುತ್ ತಂತಿಗೆ ಬಡಿದು ಈ ಅವಗಢ ಸಂಭವಿಸಿದೆ. ಕಿಶೋರ್ ಮತ್ತು ದೀಪಕ್ ಎಂಬ ಇಬ್ಬರು ಪೈಲಟ್ಗಳು ಎಂಜಿನಿಯರ್ಗಳಾದ ರಾಂಪ್ರಕಾಶ್ ಗುಪ್ತಾ, ಪ್ರಭಾತ್ ತ್ರಿವೇದಿ, ಆನಂದ್ ಕುಮಾರ್ ಮತ್ತು ಕಾರ್ತಿಕ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಂಪನಿಯ ವಿಮಾನಗಳನ್ನು ರಿಪೇರಿ ಮಾಡಲು ಎಂಜಿನಿಯರ್ಗಳನ್ನು ಕರೆದುಕೊಂಡು ಹೋಗುತ್ತಿತ್ತು ಎನ್ನಲಾಗಿದೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 