ಗೋಏರ್ ನಿಂದ 18 ವಿಮಾನ ಸಂಚಾರ ರದ್ದು, ಪ್ರಯಾಣಿಕರಿಗೆ ಅನಾನುಕೂಲ
ನವದೆಹಲಿ, ಡಿ 23, ವಿಮಾನ
ಹಾಗೂ ನುರಿತ ಚಾಲಕ ಸಿಬ್ಬಂದಿ ಕೊರತೆಯ ಕಾರಣ ಬೆಂಗಳೂರು
ದೆಹಲಿ, ಮುಂಬೈ, , ಕೋಲ್ಕತಾ ಮತ್ತು ಪಾಟ್ನಾ ಸೇರಿದಂತೆ 18 ದೇಶಿಯ
ವಿಮಾನ ಗಳ ಸಂಚಾರವನ್ನು ಗೋ ಏರ್ ರದ್ದುಪಡಿಸಿದ್ದು
ಪ್ರಯಾಣಿಕರಿಗೆ ಅನಾನುಕೂಲವಾಗಿದೆ. ಮುಂಬೈ, ಗೋವಾ,
ಬೆಂಗಳೂರು, ದೆಹಲಿ, ಶ್ರೀನಗರ, ಜಮ್ಮು, ಪಾಟ್ನಾ, ಇಂದೋರ್ ಮತ್ತು ಕೋಲ್ಕತ್ತಾ ಸೇರಿದಂತೆ 18 ವಿಮಾನ ಸಂಚಾರವನ್ನು ಗೋಏರ್ ಸೋಮವಾರ ರದ್ದುಗೊಳಿಸಿದೆ. ವಿಮಾನಗಳು ಮತ್ತು ಸಿಬ್ಬಂದಿ ಕೊರತೆ,ಕಾರಣ ಸಂಚಾರ ರದ್ದಾಗಿದೆ ಎನ್ನಲಾಗಿದೆ. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆಯ ಕಾರಣದಿಂದಾಗಿ
ಸೇವೆಗೆ ಅಡ್ಡಿ ಉಂಟಾಗಿದೆ ಎಂದು ಗೋಏರ್ ಹೇಳಿಕೆಯಲ್ಲಿ
ತಿಳಿಸಿದೆ.ಆದರೆ ಸೋಮವಾರ ರದ್ದಾದ ವಿಮಾನಗಳ ನಿಖರ ಸಂಖ್ಯೆಯನ್ನು ವಿಮಾನ ಸಂಸ್ಥೆ ಬಹಿರಂಗಪಡಿಸಿಲ್ಲ ಇದರ ಜೊತೆಗೆ ದೇಶದ ಕೆಲವು ಭಾಗಗಳಲ್ಲಿನ ಪ್ರತಿಕೂಲ ಹವಾಮಾನ,
ಮಂದಬೆಳಕು , ಮತ್ತು ಸಿಎಎ ವಿರೋಧಿ ಪ್ರತಿಭಟನೆಗಳು ಸಹ ಇದಕ್ಕೆ ಕಾರಣ ಎನ್ನಲಾಗಿದೆ ಆದರೆ ವಿಮಾನಗಳ ಹಠಾತ್ ರದ್ದತಿಯಿಂದ ಪ್ರಯಾಣಿಕರಿಗೆ ಸಾಕಷ್ಟು
ಅನಾನುಕೂಲತೆ ಉಂಟಾಗಿದೆ ಗೋಏರ್ ಬೆಳಿಗ್ಗೆ ವಿಮಾನ
ರದ್ದಾಗಿದೆ ಎಂದು ಸಂದೇಶ ಕಳುಹಿಸಿದೆ ಕೊನೆ ಘಳಿಕೆಯಲ್ಲಿ
ನಾನು ಏನು ಮಾಡಬೇಕು ಎಂದು ಪ್ರಯಾಣಿಕರೊಬ್ಬರು ಟ್ವೀಟ್ ಮಾಡಿದ್ದಾರೆ.ಆದರೂ ಪ್ರಯಾಣಿಕರ
ಅನಾನುಕೂಲತೆ ಕಡಿಮೆ ಮಾಡಲು ಸಾಧ್ಯವಿರುವ
ಎಲ್ಲ ಉಪಕ್ರಮ ಪ್ರಾರಂಭಿಸುವುದಾಗಿಯೂ ಎಂದು ವಿಮಾನಯಾನ ಸಂಸ್ಥೆ ಭರವಸೆ ನೀಡಿದೆ.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 