ಶ್ರೀ ವಿದ್ಯಾನಿಧಿ ಶ್ರೀಪಾದಂಗಳವರ 160 ನೇ ಆರಾಧನೆ
160th worship of Sri Vidyanidhi Sripadam
ತಾಳಿಕೋಟಿ 20: ತಾಲೂಕಿನ ಬಿಳೆಭಾವಿ ಗ್ರಾಮದಲ್ಲಿ ಗುರುವಾರ ಶ್ರೀ ಶ್ರೀ ಶ್ರೀ ವಿದ್ಯಾನಿಧಿ ತೀರ್ಥ ಶ್ರೀಪಾದಂಗಳವರ 160 ನೇ ಆರಾಧನೆ ನಡೆಯಿತು.
ಮುಂಜಾನೆ ಕಾಕಡಾರತಿ ಮಾಡುವದರೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ತಾಳಿಕೋಟೆ ಶ್ರೀ ಮಹಾಲಕ್ಶ್ಮೀ, ಗಾಯತ್ರಿ ಭಜನಾ ಮಂಡಳಿ ಮತ್ತು ವಿಜಯಪುರದ ಶ್ರೀಪರ್ನಿಕಾ ಭಜನಾ ಮಂಡಳಿಯಿಂದ ಭಜನೆ ನಡೆಯಿತು. ನಂತರ ಕೀರ್ತನೆ ಸೇವೆ, ಕೀರ್ತನ ಕೇಸರಿ ಶ್ರೀ ಶಂಕರರಾವ ಅನಂತಪುರ ವಿಜಯಪುರ ಇವರಿಂದ ನೆರವೇರಿತು, ಗುರುಶಿಷ್ಯ ಪರಂಪರೆ, ಕಾಣ್ವ ಶಾಖೆ ಸ್ಥಾಪನೆ, ಪಾರಮಾರ್ಥ ಸಾಧನೆ ಹೇಗೆ, ಸಂಸ್ಕಾರ ಎಂದರೇನು? ಎನ್ನುವದರ ಬಗ್ಗೆ ತಿಳಿಸಿದರು. 3 ಗುಣಗಳಾದ ತಾಮೊಗುಣ, ರಜೋಗುಣ, ಸತ್ವಗುಣ ಇವಗಳ ಬಗ್ಗೆ ವಿವರಿಸಿದರು. ನಂತರ ಶ್ರೀಯಾ ದೇಶಪಾಂಡೆ ಇವರಿಂದ ಭಾರತನಾಟ್ಯ ನೆರವೇರಿತು.
ಕೊನೆಗೆ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷಿಯ ಅಭ್ಯರ್ಥಿ ರಘುನಾಥ ಜಿ ಇವರು ಗುರುಗಳ ದರ್ಶನ ಪಡೆದರು, ತದನಂತರ ಹಲವಾರು ದಾನಿಗಳಿಗೆ ಮತ್ತು ಸಾಧಕರಿಗೆ ಸನ್ಮಾನ ನಡೆಯಿತು. ಕೊನೆಗೆ ಮಹಾಪ್ರಸಾದ ನಡೆಯಿತು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 