ಶ್ರೀ ವಿದ್ಯಾನಿಧಿ ಶ್ರೀಪಾದಂಗಳವರ 160 ನೇ ಆರಾಧನೆ
160th worship of Sri Vidyanidhi Sripadam
ತಾಳಿಕೋಟಿ 20: ತಾಲೂಕಿನ ಬಿಳೆಭಾವಿ ಗ್ರಾಮದಲ್ಲಿ ಗುರುವಾರ ಶ್ರೀ ಶ್ರೀ ಶ್ರೀ ವಿದ್ಯಾನಿಧಿ ತೀರ್ಥ ಶ್ರೀಪಾದಂಗಳವರ 160 ನೇ ಆರಾಧನೆ ನಡೆಯಿತು.
ಮುಂಜಾನೆ ಕಾಕಡಾರತಿ ಮಾಡುವದರೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ತಾಳಿಕೋಟೆ ಶ್ರೀ ಮಹಾಲಕ್ಶ್ಮೀ, ಗಾಯತ್ರಿ ಭಜನಾ ಮಂಡಳಿ ಮತ್ತು ವಿಜಯಪುರದ ಶ್ರೀಪರ್ನಿಕಾ ಭಜನಾ ಮಂಡಳಿಯಿಂದ ಭಜನೆ ನಡೆಯಿತು. ನಂತರ ಕೀರ್ತನೆ ಸೇವೆ, ಕೀರ್ತನ ಕೇಸರಿ ಶ್ರೀ ಶಂಕರರಾವ ಅನಂತಪುರ ವಿಜಯಪುರ ಇವರಿಂದ ನೆರವೇರಿತು, ಗುರುಶಿಷ್ಯ ಪರಂಪರೆ, ಕಾಣ್ವ ಶಾಖೆ ಸ್ಥಾಪನೆ, ಪಾರಮಾರ್ಥ ಸಾಧನೆ ಹೇಗೆ, ಸಂಸ್ಕಾರ ಎಂದರೇನು? ಎನ್ನುವದರ ಬಗ್ಗೆ ತಿಳಿಸಿದರು. 3 ಗುಣಗಳಾದ ತಾಮೊಗುಣ, ರಜೋಗುಣ, ಸತ್ವಗುಣ ಇವಗಳ ಬಗ್ಗೆ ವಿವರಿಸಿದರು. ನಂತರ ಶ್ರೀಯಾ ದೇಶಪಾಂಡೆ ಇವರಿಂದ ಭಾರತನಾಟ್ಯ ನೆರವೇರಿತು.
ಕೊನೆಗೆ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷಿಯ ಅಭ್ಯರ್ಥಿ ರಘುನಾಥ ಜಿ ಇವರು ಗುರುಗಳ ದರ್ಶನ ಪಡೆದರು, ತದನಂತರ ಹಲವಾರು ದಾನಿಗಳಿಗೆ ಮತ್ತು ಸಾಧಕರಿಗೆ ಸನ್ಮಾನ ನಡೆಯಿತು. ಕೊನೆಗೆ ಮಹಾಪ್ರಸಾದ ನಡೆಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 