ಕೊಪ್ಪಳದಲ್ಲಿ ಇಂದು ಶಾಂತರಸ 100ನೇ ಶತಮಾನೋತ್ಸವ ಆಚರಣೆ

100th centenary of Shantarasa celebrated in Koppal today

ಕೊಪ್ಪಳದಲ್ಲಿ ಇಂದು ಶಾಂತರಸ 100ನೇ ಶತಮಾನೋತ್ಸವ ಆಚರಣೆ  

ಕೊಪ್ಪಳ  06: ನಾಡಿನ ಖ್ಯಾತ ಕವಿ,  ಬರಹಗಾರ, ಕನ್ನಡದ ಮೊಟ್ಟ  ಮೊದಲ ಗಝಲ್ ಕವಿ, ನಾಡಿನ ಸಾಕ್ಷಿ ಪ್ರಜ್ಞೆ ಶಾಂತರಸ ಅವರ 100ನೇ ಜನ್ಮದಿನದ ನಿಮಿತ್ತ ಶಾಂತರಸ 100-  ಶತಮಾನೋತ್ಸವ ಎನ್ನುವ ಕಾರ್ಯಕ್ರಮವನ್ನು ದಿ, 7ರ ಸೋಮವಾರ ಹಮ್ಮಿಕೊಳ್ಳಲಾಗಿದೆ.  ಕವಿ ಸಮೂಹ ಕೊಪ್ಪಳ , ಬಹುತ್ವ ಬಳಗ ಕೊಪ್ಪಳ,  ಸಂಸ ಥಿಯೇಟರ್ ಬೆಂಗಳೂರು ಹಾಗೂ ಕನ್ನಡ ವಿಭಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್  ಕೊಪ್ಪಳ ಇವರ ಸಹಯೋಗದಲ್ಲಿ ದಿ. 7- ರಂದು ಸೋಮವಾರ ಬೆಳಿಗ್ಗೆ ಹತ್ತು ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೊಪ್ಪಳ ದ ಸಹಾಯಕ ನಿರ್ದೇಶಕ ಡಿ ಸುರೇಶ್ ಇವರು ಉದ್ಘಾಟನೆನೆರವೇರಿಸುವರು. ಶಾಂತರಸರ ಬದುಕು ಬರಹ  ಕುರಿತು  ಬರಹಗಾರಅಕ್ಬರ್ ಕಾಲಿ ಮಿರ್ಚಿ  ಹಾಗೂ  ಗಾಯತ್ರಿ ಭಾವಿಕಟ್ಟಿ  ಮುಖ್ಯಸ್ಥರು, ಕನ್ನಡ ವಿಭಾಗ ಸರಕಾರಿ ಪ್ರಥಮ ದರ್ಜೆ ಕಾಲೇಜ್ ರವರು ಉಪನ್ಯಾಸ ನೀಡಲಿದ್ದಾರೆ. ಡಾ.ಭಾಗ್ಯಜ್ಯೋತಿ  ಸಹ ಪ್ರಾಧ್ಯಾಪಕರು , ಹಾಗೂ ಗ್ಯಾನೇಶ್ ಹ್ಯಾಟಿ  ಅಧ್ಯಕ್ಷರು ಬ್ಯಾಡ್ಮಿಂಟನ್ ಅಸೋಸಿಯೇಷನ್ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದುಕಾಲೇಜಿನ ವಿದ್ಯಾರ್ಥಿಗಳಿಂದ  ಗಜಲ್ ವಾಚನ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನುಕಾಲೇಜಿನ ಪ್ರಾಂಶುಪಾಲರಾದ  ಡಾ,ಡಿ ಹೆಚ್ ನಾಯಕ್ ವಹಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಆಸಕ್ತರು ಭಾಗವಹಿಸಲು ಸಂಘಟಕಸಿರಾಜ್ ಬಿಸರಳ್ಳಿ ಕೋರಿದ್ದಾರೆ.