ಕಲುಷಿತಗೊಂಡು ಹಸಿರು ಬಣ್ಣಕ್ಕೆ ತಿರುಗಿದ ತುಂಗಭದ್ರಾ ನದಿ ನೀರು
Tungabhadra river water turned green due to pollution
ಕಲುಷಿತಗೊಂಡು ಹಸಿರು ಬಣ್ಣಕ್ಕೆ ತಿರುಗಿದ ತುಂಗಭದ್ರಾ ನದಿ ನೀರು
ಹೂವಿನಹಡಗಲಿ 17 : ತಾಲೂಕಿನ ಕಾಗನೂರು.ಕೊಂಬಳಿ.ಮದಲಗಟ್ಟಿ ಮತ್ತು ಮಂಡರಗಿ ಭಾಗದ ಗಂಗಾಪುರ. ಕೊರ್ಲಹಳ್ಳಿ ಭಾಗದ ತುಂಗಭದ್ರಾ ನದಿ ನೀರು ಹಸಿರು ಬಣ್ಣಕ್ಕೆ ತಿರುಗುತ್ತಿದ್ದು ಇದರಿಂದ ನದಿ ನೀರು ಬಳಸುವ ಜನರು ಆತಂಕ ವ್ಯಕ್ತಪಡಿಸಿದ್ದಾರೆ. ನದಿ ಮಧ್ಯಭಾಗದಲ್ಲಿರುವ ನೀರು ಅಷ್ಟೊಂದು ಹಸಿರು ಕಾಣದಿದ್ದರೂ ದಡದಲ್ಲಿ ನೀರು ಪಾಚಿಗೊಂಡು ಹಚ್ಚ ಹಸಿರಿನಿಂದ ಕಾಣುತ್ತಿದೆ. ಸಿಂಗಟಾಲೂರು ಬ್ಯಾರೇಜ್ನಿಂದ ನದಿಗೆ ನೀರು ಹರಿಸುವುದನ್ನು ಸಂಪೂರ್ಣ ನಿಲ್ಲಿಸಲಾಗಿದೆ. ನದಿಯಲ್ಲಿ ನೀರು ಹರಿಯುವಾಗ ಹಸಿರು ಬಣ್ಣದ ನೀರು ಕಾಣುವುದಿಲ್ಲ. ಹರಿವು ನಿಂತಾಗ ನೀರು ಹಸಿರು ಬಣ್ಣಕ್ಕೆ ತಿರುಗುತ್ತಿದೆ.ನದಿಯಿಂದ ಪಂಪ್ಸೆಟ್ಗಳ ಮೂಲಕ ಜಮೀನಿಗೆ ಹರಿದು ಬರುವ ನೀರು ಹಸಿರಾಗಿದೆ. ಇದರಿಂದ ಭತ್ತದ ಸಸಿಗಳು ನಾಶವಾಗುವ ಹಾಗೂ ಇತರ ಬೆಳೆ ಹಾನಿಯಾಗುವ ಆತಂಕವನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ. ಪಶುಗಳಿಗೆ ನದಿ ನೀರು ಕುಡಿಸುವುದರಿಂದ ಅನಾರೋಗ್ಯ ಕಾಡುವ ಭಯ ಮನೆ ಮಾಡಿದೆ. ಇನ್ನೂ ಜಲಚರಗಳಿಗೆ ತೊಂದರೆಯಾಗುವ ಸಂಭವ ಹೆಚ್ಚಿದೆ. ಬೇಸಿಗೆ ಆರಂಭಕ್ಕೂ ಪೂರ್ವದಲ್ಲಿಯೇ ನೀರು ಹಸಿರು ಪಾಚಿಯಂತೆ ಕೂಡಿದ್ದು ಚಿಂತೆಗೀಡು ಮಾಡಿದೆ.ಸಿಂಗಟಾಲೂರು ಬ್ಯಾರೇಜ್ ಕೆಳಗಡೆಯ ಈ ಭಾಗದಲ್ಲಿ ನೀರು ಹಸಿರಾಗಿ ಕಾಣುತ್ತಿದೆ. ಬ್ಯಾರೇಜ್ನ ಹಿನ್ನೀರು ಭಾಗದಲ್ಲಿ ಮಾತ್ರ ಹಸಿರು ಆಗಿಲ್ಲ. ಆದ್ದರಿಂದ ಈ ಭಾಗದ ನೀರನ್ನು ಪರೀಕ್ಷಿಸಬೇಕು ಎಂದು ನದಿ ತೀರದ ಮದಲಗಟ್ಟಿ ಗ್ರಾಮದ ಹಾಲೇಶ್ ಒತ್ತಾಯಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 