ಮಹಿಳೆಗೆ ಸ್ವಾವಲಂಬನೆ ಕಲಿಸುವುದೇ ಸಮಾಜ ಸೇವೆ : ಮಹಾಂತೇಶ
Teaching self-reliance to women is social service: Mahantesh
ಮಹಿಳೆಗೆ ಸ್ವಾವಲಂಬನೆ ಕಲಿಸುವುದೇ ಸಮಾಜ ಸೇವೆ : ಮಹಾಂತೇಶ
ಮಹಾಲಿಂಗಪುರ,19 : ಮಹಿಳೆಯರಿಗೆ ದುಡಿಯುವ ಕೌಶಲ್ಯ ಕಲಿಸಿ ಸ್ವಾಭಿಮಾನದಿಂದ ಬದುಕುವ ಅವಕಾಶ ಕಲ್ಪಿಸುವುದೇ ನಿಜವಾದ ಸಮಾಜ ಸೇವೆ. ಆ ಕೆಲಸವನ್ನು ನಿಸ್ವಾರ್ಥದಿಂದ ಮಾಡಿದ ಚನ್ನಬಸು ಹುರಕಡ್ಲಿ ಮತ್ತು ಸ್ಫೂರ್ತಿ ಸಂಸ್ಥೆಯ ಕಾರ್ಯ ಮಾದರಿ ಎಂದು ಜಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ ಹೇಳಿದರು.
ಸ್ಥಳೀಯ ಬಸವನಗರ ಸಮುದಾಯ ಭವನದಲ್ಲಿ ಜರುಗಿದ ಉಚಿತ ಸ್ವಯಂ ಉದ್ಯೋಗ ತರಬೇತಿ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ಸ್ವಯಂ ಉದ್ಯೋಗದಿಂದ ಮಹಿಳೆಯರಲ್ಲಿ ಸ್ವಾಭಿಮಾನ, ಸ್ವಾವಲಂಬನೆ, ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ದಾರಿಯಾಗಿದೆ. ಇದು ಯಾರೂ ಕದಿಯಲಾಗದ ಕಾಣಿಕೆ ಎಂದರು.
ಸ್ಥಳೀಯ ಸಿ.ಎಂ.ಹುರಕಡ್ಲಿ ಫೌಂಡೇಶನ್ ಮತ್ತು ಶ್ರೀ ಐರಣಿ ಮಹಾಸಂಸ್ಥಾನ ಹೊಳೆಮಠ, ಸ್ಫೂರ್ತಿ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ದಾವಣಗೆರೆ ಇವರ ಸಹಯೋಗದಲ್ಲಿ ಮಹಿಳೆಯರಿಗೆ 105 ದಿನಗಳ ಉಚಿತ ಸ್ವಯಂ ಉದ್ಯೋಗ ತರಬೇತಿ ನೀಡಿ ಪ್ರಮಾಣ ಪತ್ರ ವಿತರಿಸಲಾಯಿತು.
ಪುರಸಭೆಯ ನೂತನ ನಾಮನಿರ್ದೇಶಿತ ಸದಸ್ಯರಾದ ಬಸವರಾಜ ಕರೆಹೊನ್ನ, ಅನಂತನಾಗ ಬಂಡಿ, ಅಪ್ಪಾಸಾಬ ನಾಲಬಂದ, ಲಕ್ಕಪ್ಪ ಭಜಂತ್ರಿ ಹಾಗೂ ಆರೋಗ್ಯ ಸಮಿತಯ ನೂತನ ನಾಮನಿರ್ದೇಶಿತ ಸದಸ್ಯರಾದ ಮಹಾಲಿಂಗಪ್ಪ ಮಾಳಿ, ಸಂಜು ಅಂಗಡಿ, ಮಾರುತಿ ಚನ್ನದಾಸರ, ಶಿಲ್ಪಾ ಉಪ್ಪಾರ ಹಾಗೂ ಕೌನ್ ಬನೇಗಾ ಕರೋಡ್ ಪತಿಯಲ್ಲಿ 50 ಲಕ್ಷ ರೂ.ಗೆದ್ದ ಸ್ಥಳೀಯ ಪ್ರತಿಭೆ ರಂಜಾನ್ ಪೀರಜಾದೆ ಇವರನ್ನು ಸಿ.ಎಂ.ಫೌಂಡೇಶನ್ ವತಿಯಿಂದ ಗೌರವಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಗುಳ್ಳಪ್ಪ ಗೊಳಸಂಗಿ, ಮುಖಂಡರಾದ ಹನಮಂತ ಶಿರೋಳ, ಮಹಾಲಿಂಗಪ್ಪ ಕಂಠಿ, ವಿಜಯಕುಮಾರ ಸಬಕಾಳೆ, ಪ್ರಕಾಶ ಬಾಡನವರ, ಮಲಕಾಜಪ್ಪ ಹನಗಂಡಿ, ಕೃಷ್ಣಾ, ಬಸವರಾಜ ಗಿರಿಸಾಗರ, ಶಿವಾನಂದ ಕೊಣ್ಣೂರ, ಪುರಸಭಾ ಸದಸ್ಯೆ ಸವಿತಾ ಹುರಕಡ್ಲಿ, ಸುವರ್ಣಾ ಕರೆಹೊನ್ನ, ಸಿಂಧೂರ ಹಲಸಪ್ಪಗೋಳ, ತರಬೇತುದಾರ ಗುಂಡಪ್ಪ ಇತರರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 