ಸಾಮಾಜಿಕ ನ್ಯಾಯ, ರಾಜಕೀಯ ಬದಲಾವಣೆಗಾಗಿ ಜೆಡಿಯು ಪಕ್ಷವನ್ನು ಬೆಂಬಲಿಸಿ : ಶ್ರೀಶೈಲಗೌಡ
Support JDU for social justice and political change: Srishaila Gowda
ಲೋಕದರ್ಶನ ವರದಿ
ಧಾರವಾಡ 08 : ಇಲ್ಲಿಯ ಶ್ರೀನಗರದಲ್ಲಿ ಜೆಡಿಯು ಪಕ್ಷದ ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಜಿಲ್ಲಾಅಧ್ಯಕ್ಷ ಶ್ರೀಶೈಲಗೌಡ ಕಮತರ ಮಾತನಾಡಿ, ಜೆಡಿಯು ಪಕ್ಷವು ಪ್ರಜಾಪ್ರಭುತ್ವ ಹಾಗೂ ಸಮಾಜವಾದಿ ತಳಹದಿಯ ಮೇಲೆ ಭಾರತವನ್ನು ಕಟ್ಟಲು ಗಾಂಧಿತತ್ವ ಮೌಲ್ಯಗಳನ್ನು ಪಾಲಿಸುತ್ತಾ, ದೇಶದ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದ ಸ್ಪೂರ್ತಿ ಪಡೆದು ಪ್ರತಿಯೊಬ್ಬ ನಾಗರಿಕನು ಸ್ವತಂತ್ರಜೀವನ ನಡೆಸಲು ಹೋರಾಡುತ್ತಿದೆ. ಇಂದಿನ ಅನ್ಯ ಪಕ್ಷಗಳು ಅಧಿಕಾರಕ್ಕಾಗಿ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿಲ್ಲ. ಜೆಡಿಯು ಪಕ್ಷವುರಾಜ್ಯ ಮತ್ತು ಜಿಲ್ಲೆಯಲ್ಲಿ ಯಾವುದೇ ಚುನಾಯಿತ ಪ್ರತಿನಿಧಿ ಇಲ್ಲದಿದ್ದರೂ ರೈತರ, ಮಹಿಳೆಯರ, ಕಾರ್ಮಿಕರ, ಶೋಷಿತ ವರ್ಗದವರ, ವಿದ್ಯಾರ್ಥಿಗಳ, ಹಿರಿಯ ನಾಗರಿಕರ ಸೇರಿದಂತೆ ಸಮಸ್ತ ಜನತೆಯ ಆಶೋತ್ತರಗಳಿಗೆ ನಿರಂತರವಾಗಿ ಹೋರಾಟ ಮಾಡುತ್ತ ಬಂದಿದ್ದು, ಜನತೆಯ ಭಾವನೆಗಳಿಗೆ ಗೌರವಕೊಡುತ್ತ ಹೋರಾಡುತ್ತಿದೆ ಈ ನಿಟ್ಟಿನಲ್ಲಿ ಸಮಸ್ತ ಜಿಲ್ಲೆಯ ನಾಗರಿಕರು ಪಕ್ಷದ ಸದಸ್ಯತ್ವ ಪಡೆದು ಪಕ್ಷವನ್ನು ಬೆಂಬಲಿಸಿ ಜಿಲ್ಲೆಯನ್ನುಅಭಿವೃದ್ಧಿ ಪಥದತ್ತ ಕೊಂಡ್ಯೊಯಲು ಕೈಜೋಡಿಸಬೇಕೆಂದು ಕೋರಿದರು. ಈ ಸಂದರ್ಭದಲ್ಲಿ ಪಕ್ಷದ ಪದಾಧಿಕಾರಿಗಳಾದ ಫಿರೋಜಖಾನ್ ಹವಾಲ್ದಾರ, ಓಂಸಂಗಮೇಶ ಐಹೊಳೆ, ಪರಶುರಾಮ ಮೂಲಿಮನಿ, ನಿಂಗರಡ್ಡಿ ಕುರ್ತಕೋಟಿ, ಸಿದ್ದಪ್ಪ ದೊಡಮನಿ, ಸಯ್ಯದ ಮಕಾನದಾರ, ಮಲ್ಲವ್ವದೊಡಮನಿ, ಶಿವಾನಂದ ಅಮರಶೆಟ್ಟಿ ಸೇರಿದಂತೆ ಅನೇಕರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 