ಸಿರುಗುಪ್ಪ: ಮೀನುಮರಿ ದಾಸ್ತಾನು ಕಾರ್ಯಕ್ರಮಕ್ಕೆ ಚಾಲನೆ

Siruguppa: Fish stocking program launched

ಸಿರುಗುಪ್ಪ: ಮೀನುಮರಿ ದಾಸ್ತಾನು ಕಾರ್ಯಕ್ರಮಕ್ಕೆ ಚಾಲನೆ 

ಬಳ್ಳಾರಿ 18: ಸಿರುಗುಪ್ಪ ತಾಲ್ಲೂಕಿನ ಹೆರಕಲ್ ಗ್ರಾಮದ ತುಂಗಭದ್ರಾ ನದಿಭಾಗದಲ್ಲಿ ಮೀನುಮರಿ ದಾಸ್ತಾನು ಕಾರ್ಯಕ್ರಮಕ್ಕೆ ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ್ ಅವರು ಸೋಮವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮೀನು ಕೃಷಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹಾಗೂ ಮೀನು ಉತ್ಪಾದನೆ ಹೆಚ್ಚಿಸಲು ಮೀನುಮರಿಗಳನ್ನು ಬಿತ್ತನೆ ಮಾಡಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಮೀನುಗಾರಿಕೆ ಉಪ ನಿರ್ದೇಶಕ ಶಿವಣ್ಣ, ಮುನಿರಾಬಾದ್ ಮೀನುಗಾರಿಕೆ ಉಪ ನಿರ್ದೇಶಕರಾದ ಕಣ್ಣಿ ಭಾಗ್ಯ, ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಬಿ.ಭಾವನ ಸೇರಿದಂತೆ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು, ಗ್ರಾಮಸ್ಥರು, ಸ್ಥಳೀಯ ಮೀನುಗಾರರು ಉಪಸ್ಥಿತರಿದ್ದರು.