ಉದ್ಯಮಶೀಲತಾ ಸಾಮರ್ಥ್ಯ ಗುರುತಿಸುವ ಕುರಿತು ಅಧಿವೇಶನ
ಲೋಕದರ್ಶನ ವರದಿ
ಬೆಳಗಾವಿ 12: ಕೆಎಲ್ಎಎಸ್ನ ಐಎಂಇಆರ್ ಮತ್ತು ಇಡಿಐ ಉದ್ಯಮಶೀಲತಾ ಸಾಮರ್ಥ್ಯಗಳನ್ನು ಗುರುತಿಸುವ ಕಾಯರ್ಾಗಾರವನ್ನು ಆಯೋಜಿಸಿ ಗುಜರಾತನ ಅಹಮದಾಬಾದನ ಉದ್ಯಮಶೀಲತೆ ಅಭಿವೃದ್ಧಿ ಸಂಸ್ಥೆ (ಇಡಿಐಐ) ಯೊಂದಿಗೆ ಕೆಎಲ್ಎಸ್ ಐಎಂಇಆರ್ ಒಂದು ವರ್ಷದ ಮುಕ್ತ ಕಲಿಕೆ ಡಿಪ್ಲೊಮಾ ಇನ್ ಎಂಟಪರ್ೆ್ರನ್ಯೂಶರ್ಿಪ್ ಅಂಡ್ ಬಿಸಿನೆಸ್ ಮ್ಯಾನೇಜ್ಮೆಂಟ್ (ಡಿಇಬಿಎಂ) ನೀಡುತ್ತದೆ.
ಕೋಸರ್್ ಮುಕ್ತ ಮತ್ತು ದೂರಶಿಕ್ಷಣದ ಮೂಲಕ ನೀಡಲಾಗುತ್ತದೆ ಮತ್ತು ಇದನ್ನು ದೂರ ಶಿಕ್ಷಣ ಬ್ಯೂರೋ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಗುರುತಿಸುತ್ತದೆ. ಕೆಎಲ್ಎಸ್ ಐಎಂಇಆರ್ ಇಡಿಐಐ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ ಮತ್ತು ಈ ಕಾರ್ಯಕ್ರಮವನ್ನು ನೀಡಲು ಇಡಿಐಐನಿಂದ ಪ್ರಾಜೆಕ್ಟ್ ಗೈಡೆನ್ಸ್ ಸೆಂಟರ್ ಎಂದು ಗುರುತಿಸಲಾಗಿದೆ. ಎಂಬಿಎ ಪದವಿ ಪಡೆಯುತ್ತಿರುವ ಆಯ್ದ ವಿದ್ಯಾಥರ್ಿಗಳು ಈ ಕಾರ್ಯಕ್ರಮಕ್ಕೆ ದಾಖಲಾಗುತ್ತಾರೆ ಮತ್ತು ಅವರ ಎಂಬಿಎ ಪದವಿಯೊಂದಿಗೆ ಇಡಿಐಐನಿಂದ ಉದ್ಯಮಶೀಲತೆ ಮತ್ತು ವ್ಯವಹಾರ ನಿರ್ವಹಣೆಯಲ್ಲಿ ಡಿಪ್ಲೊಮಾ ಪಡೆಯಲಿದ್ದಾರೆ.
2019-2020ರ ಬ್ಯಾಚ್ಗಳಾಗಿ ಡಿಇಬಿಎಂ ಉದ್ಘಾಟನೆ ದಿ.11ರಂದು ಬುಧವಾರ ನಡೆಯಿತು. ಇಡಿಐಐನ ರಾಜ್ಯ ಸಂಯೋಜಕಿ ಪೂಣರ್ಿಮಾ ಬಿ ಆರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು ಮತ್ತು ಉದ್ಯಮಶೀಲತಾ ಸಾಮರ್ಥ್ಯಗಳನ್ನು ಗುರುತಿಸುವ ಕುರಿತು ಅಧಿವೇಶನ ನಡೆಸಿದರು. ಅವರು ವಿದ್ಯಾಥರ್ಿಗಳ ಉದ್ಯಮಶೀಲತಾ ಸಾಮರ್ಥ್ಯಗಳನ್ನು ಗುರುತಿಸಲು ರಚನಾತ್ಮಕ ಪ್ರಶ್ನಾವಳಿಯನ್ನು ನಿರ್ವಹಿಸಿದರು ಮತ್ತು ಪ್ರತಿಕ್ರಿಯೆಯನ್ನು ಸಹ ನೀಡಿದರು.
ಸಂಸ್ಥೆಯ ನಿದರ್ೆಶಕ ಡಾ.ಅತುಲ್ ಆರ್ ದೇಶಪಾಂಡೆ ಅವರು ವ್ಯವಹಾರ ವಿಚಾರಗಳನ್ನು ಅಭಿವೃದ್ಧಿಪಡಿಸಲು ಮತ್ತು ಕಾರ್ಯಗತಗೊಳಿಸಲು ವಿದ್ಯಾಥರ್ಿಗಳನ್ನು ಪ್ರೇರೇಪಿಸಿದರು ಮತ್ತು ಉದ್ಯಮಶೀಲ ಉದ್ಯಮಗಳನ್ನು ಬೆಂಬಲಿಸಲು ಕ್ಯಾಂಪಸನಲ್ಲಿ ಲಭ್ಯವಿರುವ ಪರಿಸರ ವ್ಯವಸ್ಥೆಯ ಬಗ್ಗೆ ವಿವರಿಸಿದರು. ಪ್ರಾಜೆಕ್ಟ್ ಮಾರ್ಗದರ್ಶನ ಕೇಂದ್ರದ ಪ್ರಾಧ್ಯಾಪಕ ಮತ್ತು ಸಂಯೋಜಕಿ ಡಾ. ಪೂಣರ್ಿಮಾ ಎಂ.ಚರಂತಿಮಠ ಅವರು ಸ್ವಾಗತ ಭಾಷಣ ಮಾಡಿದರು ಮತ್ತು ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 