ಮೂಡಲಗಿಯ ಪ್ರತಿಷ್ಠಿತ ಚೈತನ್ಯ ಕೊ - ಆಫ್ ಬ್ಯಾಂಕ್ ಸಭಾ ಭವನದಲ್ಲಿ ಸತ್ಕಾರ ಸಮಾರಂಭ
Reception at the prestigious Chaitanya Co - of Bank Sabha Bhavan, Mudalagi
ಮೂಡಲಗಿಯ ಪ್ರತಿಷ್ಠಿತ ಚೈತನ್ಯ ಕೊ - ಆಫ್ ಬ್ಯಾಂಕ್ ಸಭಾ ಭವನದಲ್ಲಿ ಸತ್ಕಾರ ಸಮಾರಂಭ
ಮೂಡಲಗಿ 12 : ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಪ್ರಕಾಶ್ ಗೂಳಪ್ಪ ನಿಡಗುಂದಿ ಅವರು ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಅವರ ಗೆಳೆಯರ ಬಳಗದಿಂದ ಮೂಡಲಗಿಯ ಪ್ರತಿಷ್ಠಿತ ಚೈತನ್ಯ ಕೊ - ಆಫ್ ಬ್ಯಾಂಕ್ ಸಭಾ ಭವನದಲ್ಲಿ ಸತ್ಕಾರ ಸಮಾರಂಭ ಜರುಗಿತು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗೆಳೆಯರ ಬಳಗದ ಸಿ, ಎಮ್, ಹಂಜಿ ಗುರುಗಳು ಮಾತನಾಡಿ, ನಮ್ಮ ಬಳಗದ ಆತ್ಮೀಯ ಸ್ನೇಹಿತರಾದ ಪ್ರಕಾಶ ನಿಡಗುಂದಿ ಅವರು 1980 ರಲ್ಲಿ ರಾಯಬಾಗದಲ್ಲಿ ಕೃಷಿ ಸಹಾಯಕರು ಆಗಿ ಸೇವೆಗೆ ಸೇರಿ ಉತ್ತಮ ಸೇವೆ ಸಲ್ಲಿಸಿ ನಂತರ 2012 ರಲ್ಲಿ ಸಹಾಯಕ ಕೃಷಿ ಅಧಿಕಾರಿಯಾಗಿ ಬಡ್ತಿ ಹೊಂದಿ ಮತ್ತೆ ಕೃಷಿ ಅಧಿಕಾರಿಯಾಗಿ ಸ್ವಂತ ಊರಿಗೆ ವರ್ಗಾವಣೆ ಹಾಗೂ ಬಡ್ತಿ ಹೊಂದಿ 37 ವರ್ಷ ಸುದೀರ್ಘವಾಗಿ ಸಲ್ಲಿಸಿದ ಸೇವೆಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ನಿಷ್ಕಳಂಕ ರಹಿತ ಅವರ ಸೇವೆಯಿಂದ ಎಲ್ಲರ ಅಚ್ಚುಮೆಚ್ಚಿನ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿರುವ ಅವರ ನಿವೃತ್ತಿ ಜೀವನ ಸುಖಮಯ ಆಗಿರಲಿ ಎಂದರು ಬಳಗದ ಇನ್ನೋರ್ವ
ಅತಿಥಿ ಗಂಗಾಧರ ಬಿಜಗುಪ್ಪಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಮಾತನಾಡಿ, ರೈತಾಪಿ ವರ್ಗದ ಜನರೊಂದಿಗೆ ಉತ್ತಮ ಭಾಂದವ್ಯ ಹೊಂದಿ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಸ್ನೇಹಿತನ ನಿವೃತ್ತಿ ಜೀವನ ಚೆನ್ನಾಗಿರಲಿ ಎಂದು ಆಶಿಸಿದರು. ಬಳಗದ ಯಾಕೂಬ್ ಸಣ್ಣಕ್ಕಿ ಮಾತನಾಡಿದರು. ಸಮಾರಂಭದಲ್ಲಿ ಪ್ರಕಾಶ ನಿಡಗುಂದಿ ಹಾಗೂ ಅವರ ಪತ್ನಿ ರಾಜಶ್ರೀ ಅವರನ್ನು ಗೆಳೆಯರ ಬಳಗದ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗೆಳೆಯರ ಬಳಗದ ಪ್ರದೀಪ ಲಂಕೆಪ್ಪನವರ,ಮೋನೇಶ ಪತ್ತಾರ, ಬಸವರಾಜ ರಂಗಾಪೂರ, ಮೀರಾಸಾಬ ಕಳ್ಳಿಮನಿ, ಅಶೋಕ ಮೂಡಲಗಿ, ಶಶಿಕಾಂತ ಬಾಗೋಜಿ, ಮಲ್ಲಪ್ಪ ಮುರಗೋಡ, ಶಿವಬಸು ನೇಮಗೌಡರ, ಮಾಹದೇವಿ ಸಣ್ಣಕ್ಕಿ ಕಾಶಿಬಾಯಿ ಬಿಜಗುಪ್ಪಿ ಸೇರಿದಂತೆ ಅನೇಕರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 