ಗೃಹಲಕ್ಷ್ಮಿ ಹಣದಿಂದ ಉಳುಮೆ ಮಾಡಲು ರೋಟವೆಟರ್ ಖರೀದಿ
Purchase of rotavator for plowing with Grilahakshmi money
ಗೃಹಲಕ್ಷ್ಮಿ ಹಣದಿಂದ ಉಳುಮೆ ಮಾಡಲು ರೋಟವೆಟರ್ ಖರೀದಿ
ಹಾವೇರಿ 22: ಜಿಲ್ಲೆಯ ಮಂಟಗಣಿ ಗ್ರಾಮದ ಶಾರದಾ ಜಗಣ್ಣನವರ (ಅತ್ತೆ)ಹಾಗೂ ಲಕ್ಷ್ಮೀ ಜಗಣ್ಣನವರ (ಸೊಸೆ) ಇವರು ಕರ್ನಾಟಕ ಸರಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಬಂದ ಹಣವನ್ನು ಕೂಡಿಟ್ಟುಕೊಂಡು ಜಮೀನು ಉಳುಮೆ ಮಾಡಲು ರೋಟವೆಟರ್ ಖರೀದಿಸಿದ್ದಾರೆ. ಗ್ಯಾರಂಟಿ ಯೋಜನೆಯ ಹಣವನ್ನು ವಿಭಿನ್ನವಾಗಿ ಕೃಷಿ ಕ್ಷೇತ್ರದ ಉಪಕರಣಕ್ಕೆ ಬಳಕೆ ಮಾಡಿ ಮಾದರಿಯಾದ ಅತ್ತೆ ಮತ್ತು ಸೊಸೆಯನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅವರ ಮನೆಗೆ ಹೋಗಿ ಗೌರವಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕಳಸೂರ ಗ್ರಾಪಂ ಅಧ್ಯಕ್ಷರಾದ ಪವಿತ್ರಾ ಮಂಟಗಣಿ,ಸದಸ್ಯರಾದ ಶ್ರೀಧರ ದೊಡ್ಡಮನಿ,ಪುಟ್ಟಪ್ಪ ಮರಗಿ, ಗೀತಾ ಮೋಹನ್ ಹಾವೇರಿ,ಕಾಂಗ್ರೆಸ್ ಪಕ್ಷದ ಮುಖಂಡರಾದ ಭೂಪಾಲಪ್ಪ ಚೂಳಕಿ, ದೇವಕ್ಕ ಜಗಣ್ಣನವರ, ಬಸವಣ್ಣೆವ್ವ ಸವಣೂರ,ನಾಗಪ್ಪ ರಭಜ್ಜನವರ,ಶಿವರಾಜ ಹುರಳಿಕುಪ್ಪಿ,ಆಕಾಶ ಕರೇಚಿಕ್ಕಣ್ಣನವರ ಸೇರಿದಂತೆ ಅನೇಕರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 