ಆಂಧ್ರ್ರದೇಶದ ರಾಯಚೋಟಿಗೆ ವೀರಭದ್ರ ಭಕ್ತರ ಪಾದಯಾತ್ರೆ
Pilgrimage of Veerabhadra devotees to Rayachoti in Andhra Pradesh
ಆಂಧ್ರ್ರದೇಶದ ರಾಯಚೋಟಿಗೆ ವೀರಭದ್ರ ಭಕ್ತರ ಪಾದಯಾತ್ರೆ
ಧಾರವಾಡ, ಬೆಳಗಾವಿ, ವಿಜಯಪೂರ ಹಾಗೂ ಶಿವಮೊಗ್ಗ ಜಿಲ್ಲೆಗಳ ವೀರಭದ್ರ ದೇವರ ಭಕ್ತರು ಭಾಗಿ ಧಾರವಾಡ 22: ತಾಲೂಕಿನ ಹೆಬ್ಬಳ್ಳಿ ಗ್ರಾಮದ ವೀರಭದ್ರ ದೇವರ ಪುರವಂತ ಸೇವಕ ಮಲ್ಲಿಕಾರ್ಜುನ ಬಳಿಗಾರ ಕಳೆದ 3 ವರ್ಷಗಳಿಂದ ಆಂಧ್ರ್ರದೇಶ ರಾಜ್ಯದ ರಾಯಚೋಟಿ ಕ್ಷೇತ್ರದ ವೀರಭದ್ರ ದೇವರ ದೇವಾಲಯದವರೆಗೆ ಪಾದಯಾತ್ರೆ ನಡೆಸುತ್ತಿದ್ದು, ಈ ಬಾರಿ ಇವರ ನೇತೃತ್ವದಲ್ಲಿ ವಿವಿಧ ಜಿಲ್ಲೆಗಳ ಒಟ್ಟು 7 ಜನ ವೀರಭದ್ರ ಭಕ್ತರು ಪಾದಯಾತ್ರೆ ಕೈಕೊಂಡಿದ್ದಾರೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕು ಸಂಪಗಾಂವ ಗ್ರಾಮದ ಶಿವಪುತ್ರಯ್ಯ ಪೂಜಾರ 2ನೆಯ ಬಾರಿಗೆ ಪಾದಯಾತ್ರೆ ನಡೆಸುತ್ತಿದ್ದು, ಈ ಬಾರಿ ನವಲಗುಂದ ತಾಲೂಕಿನ ಶಿರಕೋಳ ಗ್ರಾಮದ ಕಲ್ಲಯ್ಯ ಚಿಕ್ಕಮಠ, ಶಿವಮೊಗ್ಗ ಜಿಲ್ಲೆಯ ನೇರಲಗಿ ಗ್ರಾಮದ ಎನ್.ಪಿ. ಕೊಟ್ರ್ಪಗೌಡ, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಚಂದ್ರಶೇಖರ ಹುನಗುಂದ, ಸುರೇಶ ಹುನಗುಂದ ಹಾಗೂ ರಮೇಶ ಮುಕರ್ತಿಹಾಳ ಈ ಪಾದಯಾತ್ರೆ ತಂಡ ಸೇರಿಕೊಂಡಿದ್ದಾರೆ. ಸುಮಾರು 650 ಕಿ.ಮೀ. ದೂರವನ್ನು ಈ ಪಾದಯಾತ್ರೆ ತಂಡ 15 ರಿಂದ 20 ದಿನಗಳಲ್ಲಿ ಕ್ರಮಿಸಲಿದೆ. “ಪ್ರಾತಃಕಾಲ ಮತ್ತು ಸಾಯಂಕಾಲ ಎಳೆ ಬಿಸಿಲಿನ ಸಮಯವನ್ನು ಕೇಂದ್ರೀಕರಿಸಿ ಶಿವನಾಮ ಮತ್ತು ವೀರಭದ್ರ ದೇವರ ಸಾನ್ನಿಧ್ಯದ ಸ್ಮರಣೆಯೊಂದಿಗೆ ತಮ್ಮ ಪಾದಯಾತ್ರೆ ಯಶಸ್ವಿಯಾಗಿ ನಡೆಯುತ್ತದೆ” ಎಂಬ ವಿಶ್ವಾಸವನ್ನು ಈ ತಂಡದ ನೇತೃತ್ವವಹಿಸಿರುವ ಹೆಬ್ಬಳ್ಳಿ ಗ್ರಾಮದ ಮಲ್ಲಿಕಾರ್ಜುನ ಬಳಿಗಾರ ವ್ಯಕ್ತಪಡಿಸುತ್ತಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 