ಹೊಸ ಜಿಲ್ಲಾಡಳಿತ ಭವನದಲ್ಲಿ ಹಲವು ಸಮಸ್ಯೆ
Many problems in the new district administration building
ಬಳ್ಳಾರಿ 12: ನಗರದ ರಾಜಕುಮಾರ್ ರಸ್ತೆಯಲ್ಲಿನ ನೂತನ ಜಿಲ್ಲಾಡಳಿತ ಭವನದಲ್ಲಿ ಅನೇಕ ಸಮಸ್ಯೆಗಳು ಎದುರಾಗಿವೆ.ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾಗಿ ಈ ಜಿಲ್ಲಾಡಳಿತ ಭವನ ನಿರ್ಮಾಣವಾಗಿದೆ. ಇಲ್ಲಿರುವ ಶೌಚಾಲಯಗಳಲ್ಲಿ ನಲ್ಲಿಗಳು ಅನೇಕ ದಿನಗಳಿಂದ ಕೆಟ್ಟು ಹೋಗಿವೆ. ಕೆಲ ಶೌಚಾಲಯಗಳ ಬೀಗ ಸಹ ತೆರಿದಿಲ್ಲ. ಅವ್ಯವಸ್ಥೆ ಇರುವುದರಿಂದ ಕಚೇರಿಗೆ ಬಂದ ಜನತೆ ಶೌಚಾಲಯ ಬಳಸುವುದು ಸಮಸ್ಯೆಯಾಗಿದೆ.ಇಷ್ಟೇ ಅಲ್ಲದೆ ಕುಡಿಯುವ ನೀರಿನ ಫಿಲ್ಟರ್ ಗಳು ಕೂಡ ಕೆಟ್ಟುಹೋಗಿವೆ. ಇದರಿಂದಾಗಿ ಕುಡಿಯುವ ನೀರು ವ್ಯವಸ್ಥೆ ಇಲ್ಲದ ಪರಿಸ್ಥಿತಿ ಬಂದಿದೆ.
ಅಲ್ಲದೆ ಲಿಫ್ಟ್ ಕೂಡಾ ಅನೇಕ ದಿನಗಳಿಂದ ಕೆಟ್ಟು ಹೋಗಿದೆ.ಇನ್ನು ಇಲ್ಲಿ ಕ್ಯಾಂಟೀನ್ ಸೌಲಭ್ಯ ಇಲ್ಲದ ಕಾರಣ ಪ್ರತಿ ಕಚೇರಿಯಲ್ಲಿ ಹೋದಾಗ ಸಿಬ್ಬಂದಿ ಅಲ್ಲಿ ಇರಲ್ಲ. ಕೇಳಿದರೆ ಚಾಹಾ ಗೆ ಹೋಗಿದ್ದಾರೆ ಎಂದು ಹೇಳುತ್ತಾರೆ. ಅರ್ಧತಾಸು ಆದರೂ ಬರಲ್ಲ. ಕೇಳಿದರೆ ಇಲ್ಲಿ ಕ್ಯಾಂಟೀನ್ ಇಲ್ಲ. ದೂರ ಹೋಗಬೇಕು ಎನ್ನುತ್ತಾರೆ. ಜನರಿಗೂ ಇಲ್ಲಿ ಕ್ಯಾಂಟೀನ್ ನ ಅಗತ್ಯತೆ ಇದೆ.ಕೋಟ್:ಕೂಡಲೇ ಶೌಚಾಲಯದ ನಲ್ಲಿ ಮತ್ತು ಫಿಲ್ಟರ್ ರಿಪೇರಿ ಮಾಡಿಸಬೇಕು ಇಲ್ಲದಿದ್ದರೆ ಸಾರ್ವಜನಿಕರಿಗೂ ಸಿಬ್ಬಂದಿಗೂ ಸಮಸ್ಯೆ ಆಗುತ್ತದೆ ಆರ್.ವೆಂಕಟರೆಡ್ಡಿ. ಸಾಮಾಜಿಕ ಹೋರಾಟಗಾರ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 