ಮಹಾವೀರ ಪತ್ತಿನ ಸಹಕಾರ ಸಂಘ ಅದ್ಯಕ್ಷರಾಗಿ ಮಂಜುನಾಥ ಜೈನ್ ಆಯ್ಕೆ
Manjunath Jain has been selected as the President of the Mahaveer Patta Cooperative Society
ಮಹಾವೀರ ಪತ್ತಿನ ಸಹಕಾರ ಸಂಘ ಅದ್ಯಕ್ಷರಾಗಿ ಮಂಜುನಾಥ ಜೈನ್ ಆಯ್ಕೆ
ಹೂವಿನ ಹಡಗಲಿ 21: ಮಹಾವೀರ ಅಲ್ಪಸಂಖ್ಯಾತರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಮಂಜುನಾಥ ಜೈನ್ ಆಯ್ಕೆ ಆಗಿದ್ದಾರೆ.ಶುಕ್ರವಾರ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ವಕೀಲರಾದ ಮಂಜುನಾಥ ಜೈನ್ ರವರು ಅಧ್ಯಕ್ಷರಾಗಿ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಆರ್. ಪುಷ್ಪಾವತಿ, ನೂತನ ನಿರ್ದೇಶಕರಾಗಿ ಆರ್ .ಬೊಮ್ಮಣ್ಣ, ಆರ್.ಯಶೋಧರ, ಎಂ. ಶಾಂತರಾಜು,ಡಾ. ಧರ್ಮಣ್ಣ, ಜೆ .ವಿಜಯಕುಮಾರ್ ,ಹೆಚ್.ಡಿ,ಅಜಿತ್,ಆಶಾ.ಪಿ, ಗುಂಜಲ್ ಆರ್, ಪ್ರಸನ್ನ ,ವಿಪುಲ್ ಜೈನ್ ,ಸುಜಿತ್ ಜೈನ್, ಮೇಘ ಜೈನರ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷ ಮಂಜುನಾಥ್ ಮಾತನಾಡಿ ಸಂಘ ಸ್ವಂತ ಕಟ್ಟಡ ಹೊಂದಿದ್ದು, ಎಲ್ಲಾ ಸಮುದಾಯಗಳ ಬೆಂಬಲ ಹೊಂದಿದೆ.ವ್ಯವಹಾರಿಕವಾಗಿ ಉತ್ತಮ ಸ್ಥಿತಿಯಲ್ಲಿದೆ ಎಂದರು.ವೀರಣ್ಣ, ಶಾಂತರಾಜು ಮಾತನಾಡಿದರು.ಪತ್ತಿನ ಸಹಕಾರ ಸಂಘದ ಸದಸ್ಯರುಗಳು, ಮಾಜಿ ಅಧ್ಯಕ್ಷರುಗಳು ಮಾಜಿ ನಿರ್ದೇಶಕರುಗಳು ,ಶ್ರಾವಕ -ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 