ಅಂಗವಿಕಲತೆ ಶಾಪವಲ್ಲ ವರವನ್ನಾಗಿಸಿಕೊಳಿ: ಅಡಿವೇಶ ಛಬ್ಬಿ
Make disability a boon not a curse: Adivesha Chabbi
ಅಂಗವಿಕಲತೆ ಶಾಪವಲ್ಲ ವರವನ್ನಾಗಿಸಿಕೊಳಿ: ಅಡಿವೇಶ ಛಬ್ಬಿ
ರನ್ನ ಬೆಳಗಲಿ 02: ಮುಧೋಳ ಸರಕಾರಿ ಪ್ರೌಢಶಾಲೆ ಮಹಾಲಿಂಗಪುರ ಶಾಲೆಯಲ್ಲಿ ದಿ. 31ರಂದು ಮಹಾಲಿಂಗಪುರ ವಲಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿಶೇಷ ಚೇತನ ಮಕ್ಕಳ ಫಿಜಿಯೋಥೆರಪಿ ಕಾರ್ಯಕ್ರಮ ಜರುಗಿತು.
ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷ ಸಂಜಯ ರಾಥೋಡ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಅಡಿವೆಪ್ಪ ಛಬ್ಬಿ ಉದ್ಘಾಟಕರಾಗಿ ಮಾತನಾಡಿ ಅಂಗವಿಕಲತೆ ಶಾಪವಲ್ಲ ವರ ಎಂದು ಹೇಳಿದರು.
ನಮ್ಮ ನ್ಯೂನ್ಯತೆಯೇ ನಮ್ಮ ಶಕ್ತಿಯಾಗಬೇಕೆಂದು ಪ್ರೌಢಶಾಲಾ ಮುಖ್ಯ ಶಿಕ್ಷಕ ಧನಂಜಯ್ ಕುಲಕರ್ಣಿ ತಿಳಿಸಿದರು.
ಪುರಸಭಾ ಸದಸ್ಯ ಚನ್ನಬಸು ಯರಗಟ್ಟಿ, ಫಿಜಿಯೋಥೆರಪಿ ನೀಡಿದ ಡಾಕ್ಟರ್ ಪಾಟೀಲ್ ಮೇಡಂ, ಕಾರ್ಯಕ್ರಮದ ಅನುಷ್ಠಾನಾಧಿಕಾರಿ ಡಿ.ಆರ್. ಕ್ಯಾಡೀ, ಅಪ್ಸರ ಕೆಂಭಾವಿ, ಎ.ಎಮ್. ಮಂಚದ, ಅಭಿಯಂತರ ಎಚ್.ಪಿ. ರಾವಳ ಉಪಸ್ಥಿತರಿದ್ದರು. ಅನುಷ್ಠಾನಾಧಿಕಾರಿ ಬಿಎಮ್ ಮಂತ್ರಿ ನಿರೂಪಿಸಿದರು. ಸುಮಾರು 70ಕ್ಕೂ ಹೆಚ್ಚು ಅಂಗವಿಕಲ ಮಕ್ಕಳು ಫಿಜಿಯೋಥೆರಪಿ ಲಾಭ ಪಡೆದರು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 