ಮಾಧವ ತೀರ್ಥರ ಮಧ್ಯಾರಾಧನೆ
ಲೋಕದರ್ಶನ
ವರದಿ
ಕಂಪ್ಲಿ 11:
ತಾಲೂಕಿನ ಕಂಪ್ಲಿ-ಕೋಟೆಯ ತುಂಗಭದ್ರ ನದಿ ತಟದಲ್ಲಿ ಮಂತ್ರಾಲಯ
ಮಠದ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಬೃಂದಾವನಸ್ಥರಾದ ಮಾಧವ ತೀರ್ಥರ ಮಧ್ಯಾರಾಧನೆ
ಮಂಗಳವಾರ ಶ್ರದ್ಧಾಭಕ್ತಿಯಿಂದ ನಡೆಯಿತು.
ಮಂತ್ರಾಲಯದ ಗುರಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಪ್ರಾಚಾರ್ಯ ಎನ್.ವಾದಿರಾಜಾಚಾರ್ ಮಾತನಾಡಿ,
ಮಂತ್ರಾಲಯ ಮಠಕ್ಕೆ ಸಂಬಂಧಿಸಿದ ಪೂವರ್ಿಕ ಗುರು ಮಾಧವತೀರ್ಥರ ಆರಾಧನ
ಮಹೋತ್ಸವ ನದಿ ತಟದಲ್ಲಿನ ಮೂಲ
ವೃಂದಾವನದಲ್ಲಿ ನೆರವೇರಿಸಲಾಗಿದೆ.
ಮೂಲ ವೃಂದಾವನ ಮೇಲೆ
ಮಾಧವತೀರ್ಥರು ಪೂಜಿಸುತ್ತಿದ್ದ ಪ್ರತಿಮೆಗಳ ಪೆಟ್ಟಿಗೆಯನ್ನಿರಿಸಿ ನಾಣ್ಯಗಳ ಮೂಲಕ ಕನಕಾಭಿಷೇಕ
ಮಾಡಲಾಯಿತು. ಪಂಚಾಮೃತಾಭಿಷೇಕ ಸೇರಿ ಮಧ್ಯ ಆರಾಧನೆಯ
ನಾನಾ ಕಾರ್ಯಕ್ರಮಗಳು ಜರುಗಿಸಲಾಗಿದೆ. ನಂತರ ಹೊಳೆ ಆಂಜನೇಯ
ದೇವಸ್ಥಾನದಲ್ಲಿ ಮಂತ್ರಾಲಯ ಸಂಸ್ಥಾನ ಮಠದ ಮೂಲರಾಮ ದೇವರ
ಪ್ರತಿಮೆಗಳ ಪೂಜೆಯನ್ನು ಮಂತ್ರಾಲಯ ಮಠದ ಸುಬುಧೇಂದ್ರ ತೀರ್ಥರು
ನೆರವೇರಿಸಿದರು ಎಂದು ಹೇಳಿದರು.
ಮಠದ ಸುಬುಧೇಂದ್ರ ತೀರ್ಥರ
ಪೂವರ್ಾಶ್ರಮದ ತಂದೆಯವರಾದ ಗಿರಿರಾಜ ಆಚಾರ್ಯರ ನೇತೃತ್ವದಲ್ಲಿ ಮಧ್ವಾಚಾರ್ಯರ ಶಿಷ್ಯರಾದ ಮಾಧವತೀರ್ಥರ ಚರಮ ಶ್ಲೋಕದ ಮೇಲೆ
ಶಾಸ್ತ್ರೀಯ ಚಚರ್ೆ, ಸಂವಾದಗಳು ಜರುಗಿದವು. ಮಾಧವತೀರ್ಥರ ಗ್ರಂಥಗಳ ಕುರಿತು ಉಪನ್ಯಾಸ ಕಾರ್ಯಕ್ರಮಗಳು ಜರುಗಿದವು.
ಕೋಟೆಯ ಡಾ.ಧೀರಣ್ಣ ವೈದ್ಯರು,
ಬಂಡಿ ಶ್ಯಾಮಾಚಾರ್, ಉಡುಪಿ ಕೃಷ್ಣಾಚಾರ್ಯರು, ಶಿರುಗುಪ್ಪದ ಕೃಷ್ಣಾಚಾರ್ಯರು, ಪವನ್ ಆಚಾರಿ ಕುರುಡಿ,
ವೇಣುಗೋಪಾಲಚಾರ್ ಸೇರಿ ಗುರುರಾಜ ಸೇವಾಮಂಡಳಿಯವರು
ಸೇರಿ ಸರ್ವ ಸಮುದಾಯಗಳ ಸದ್ಭಕ್ತರು
ಶ್ರದ್ಧಾಭಕ್ತಿಗಳಿಂದ ಆರಾಧನೆಯಲ್ಲಿ ಪಾಲ್ಗೊಂಡಿದ್ದರು. ಸದ್ಭಕ್ತರಿಗೆ ತೀರ್ಥ ಪ್ರಸಾದ, ಅನ್ನಸಂತರ್ಪಣೆ ವಿನಿಯೋಗಗೊಂಡಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 