ಲಂಭಾಣಿ ನೃತ್ಯ ಕಲೆಗೆ ಸಂದ ಗೌರವ
ಲೋಕದರ್ಶನ ವರದಿ
ಮುದ್ದೇಬಿಹಾಳ(ವಿಜಯಪುರ)18: ಲಂಬಾಣಿ ನೃತ್ಯ ಕಲೆಗೆ ಸಂದ ಗೌರವ ಅನ್ನುವುದನ್ನು ಪುಟ್ಟ ಬಾಲಕಿ ನಂದಿತಾ ಸಾಬಿತು ಪಡಿಸಿದ್ದಾಳೆ. ಮುದ್ದೇಬಿಹಾಳ ಪಟ್ಟಣದ ಪ್ರೇರಣಾ ಕಿಂಡರ್ ಗಾರ್ಟನ ಇಂಗ್ಲೀಷ ಮಾಧ್ಯಮ ಶಾಲೆಯಲ್ಲಿ ಶನಿವಾರ ರಂದು ಮಕ್ಕಳ ದಿನಾಚರಣೆ ನಿಮಿತ್ಯ ವೇಷಭೂಷಣ ಹಾಗೂ ನೃತ್ಯ ಸ್ಪಧರ್ೆಯನ್ನು ಹಮ್ಮಿಕೊಳ್ಳಲಾಗಿತ್ತು.
ನಶಿಸಿಹೋಗುತ್ತಿರುವ ಬಂಜಾರ ಸಂಪ್ರದಾಯದ ಪ್ರಾಚೀನ ಸಂಪ್ರದಾಯಕ್ಕೆ ಮರು ಜೀವನವನ್ನು ನೀಡಿರುಚ ಶಾಲೆಯ ಎಲ್.ಕೆ.ಜಿ 4 ವರ್ಷದ ವಿದ್ಯಾಥರ್ಿನಿ ನಂದಿರಾ ಖುಬಾಸಿಂಗ ಜಾಧವ ಇವರ ಸುಪುತ್ರಿ ಲಂಭಾಣಿ ವೇಷವನ್ನು ತೊಟ್ಟು ಅವರದೆ ಭಾಷೆಯಲ್ಲಿ ಇರುವು ಜಾನಪದ ಗೀತೆಗೆ ಹೆಜ್ಜೆಹಾಕಿ(ನೃತ್ಯವನ್ನು) ಮಾಡಿ ಶಾಲೆಗೆ ಪ್ರಥಮ ಸ್ಥಾನ ತನ್ನ ಮುಡಿಗೆರಿಸಿಕೊಂಡಿದ್ದಾಳೆ. ಲಂಭಾಣಿ ಸಂಪ್ರದಾಯ ಹಾಡುವುದು ಕುಣಿಯುವುದು ಲಂಭಾಣಿ ನೃತ್ಯ ಮಹಿಳೆಯರಿಗೆ ಸಂಬಂಧಿಸಿದ ಒಂದು ಚಿತ್ತಾರ ಅನ್ನುವುದುನ್ನು ಮುದ್ದೇಬಿಹಾಳ ತಾಲ್ಲೂಕಿನ ಹುಲ್ಲೂರ ತಾಂಡಾದ ನಿವಾಸಿ ಖುಭಾಸಿಂಗ ಜಾಧವರ 4 ವರ್ಷದ ಪುಟ್ಟ ಬಾಲಕಿ ನಂದಿತಾ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ.
ನಮ್ಮ ದೇಶದ ಸಂಸ್ಕೃತೀಯನ್ನು ಮರೆಯುತ್ತಿದ್ದಾರೆ. ಈ ಬಾಲಕಿ ನಶಿಸಿ ಹೋಗುತ್ತಿರುವ ಬಂಜಾರ ಸಮುದಾಯದ ಪ್ರಾಚೀನ ಕಲೆಯನ್ನು ಮತ್ತೆ ಮರುಕಳಿಸಲು ಒಂದು ಮಾದರಿಯಾಗಿ ನಿಂತಿದ್ದಾಳೆ ಪುಟ್ಟ ಬಾಲಕಿ ಲಂಭಾಣಿ ನೃತ್ಯದ ಸಂಪ್ರದಾಯದ ಉಡುಗೊರೆ ನೋಡುಗರರಿಗೆ ಮೆಚ್ಚುಗೆ ಪಡೆಯಿತು ನೃತ್ಯದಲ್ಲಿ ಸಮೂಹ ಗಯನ ನೃತ್ಯದ ಸಂದರ್ಭದಲ್ಲಿ ನಡುನಡುವೆ ಚಪ್ಪಾಳೆ ಸುರಿಮಳೆ ನಂದಿತಾಗೆ ಸಿಕ್ಕೀರುವ ಶ್ರೀರಕ್ಷೆ ಲಯಭರಿತವಾಗಿ ಹಾಕಿರುವ ಹೆಜ್ಜೆ ಲಂಭಾಣಿ ಸಂಪ್ರದಾಯದ ಉಡುಗರಿಗೆ ಮೆಚ್ಚುಗೆ ಲಭಿಸುವಲ್ಲಿ ಪಾತ್ರವಾಯಿತು. ಈ ಪುಟ್ಟ ಬಾಲಕಿಯ ನೃತ್ಯ ಹೆಜ್ಜೆಗೆ ಜನ ಆಕಷರ್ಿಸಿತ್ತು . ಈ ಪುಟ್ಟ ಬಾಲಕಿಗೆ ವಿದ್ಯಾಭ್ಯಾಸದ ಜೊತೆಗೆ ಪಠ್ಯೆತರ ಚಟುವಟಿಕೆ ತುಂಬಾ ಆಸಕ್ತಿ ಇದೆ ಎಂದು ಈ ಬಾಲಕಿಯ ತಂದೆ ಖುಬಾಸಿಂಗ ಜಾಧವ ಪತ್ರಿಕೆಗೆ ತಿಳಿಸಿದರು
ಶಾಲೆಯ ಆಡಳಿತಾಧಿಕಾರಿ ಚಂದ್ರು ಕಲಾಲ ಮಾತನಾಡಿ ಪ್ರತಿ ವರ್ಷಕ್ಕೋಮ್ಮೆ ನಮ್ಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ವಿಶೇಷ ರೀತಿಯಲ್ಲಿ ಆಚರಿಸುತ್ತಿದ್ದು, ವೇಷಭೂಷಣಗಳ ಚಿತ್ತಾರ ಸ್ಪಧರ್ೆಯನ್ನು ಆಯೋಜಿಸುತ್ತಿದ್ದು ಈ ಸ್ಪಧರ್ೆ ಶಿಕ್ಷಣದ ಜೋತೆಗೆ ಪಠ್ಯೇತರ ಚಟುವಟಿಕೆಗೆ ಒಂದು ಮಾದರಿಯಾಗಲಿ ಎಂದು ನಾವು ಈ ಕಾರ್ಯಕ್ರಮವನ್ನು ಮಾಡುತ್ತಿದ್ದು ನಮ್ಮ ಶಾಲೆಗೆ ಬರುವ ಮಕ್ಕಳ ಪೋಷಕರು ತಮ್ಮ ತಮ್ಮ ಮಕ್ಕಳು ಭವಿಷ್ಯಕ್ಕೆ ಇಂತಹ ಕಾರ್ಯಕ್ರಮ ಮಾದರಿಯಾಗಿ ನಿಂತಿದೆ ಇಂತಹ ಕಾರ್ಯಕ್ರಮ ಯಶಸ್ವಿಯಾಗಲು ಮುಂದೇ ನಿಂತಿದ್ದು, ನಮ್ಮ ಶಾಲೆಗೆ ಒಂದು ಮಾದರಿ.
ಈ ಸಂದರ್ಭದಲ್ಲಿ ಮುಖ್ಯಗುರುಮಾತೆ ಕೆ ಸುಧಾ, ಮಧುಮತಿ ಕಲಾಲ ಕಾರ್ಯದಶರ್ಿ, ಲಲಿತಾ ಎಮ್, ಆರೀಪಾ ಬಳಬಟ್ಟಿ, ನೀಲಾ, ಸುನೀತಾ, ಪವೀತ್ರಾ ಹಿಪ್ಪರಗಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ವಿದ್ಯಾಥರ್ಿನಿಯರಾದ 3ನೇ ತರಗತಿಯ ಕುಮಾರಿ ನವನೀತಾ ಕಲಾಲ, ಪದ್ಮಶ್ರೀ ಕೆಳಗಿನಮನಿ ನಿರೂಪಿಸಿ ವಂದಿಸಿದರು.
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ 