ತಿರುಪತಿ ತಿರುಮಲ ವ್ಯವಸ್ಥೆ ಅಧ್ಯಯನ ನಡೆಸುತ್ತಿರುವ ಗುರುವಾಯೂರಪ್ಪನ್ ದೇಗುಲ ತಂಡ
tirupati
ತಿರುಪತಿ, ಡಿ 24 - ವಿಶ್ವ ಪ್ರಸಿದ್ಧ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಹಲವು ದಶಕಗಳಿಂದ ಪರಿಣಾಕಾರಿಯಾಗಿ ಮುಂದುವರಿಸಿಕೊಂಡು ಬರುತ್ತಿರುವ ವಿವಿಧ ಯೋಜನೆಗಳು, ಆಡಳಿತ, ಭದ್ರತೆ ಹಾಗೂ ಸಂಪ್ರದಾಯಗಳನ್ನು ಅಧ್ಯಯನ ನಡೆಸಲು ಕೇರಳದ ತ್ರಿಶ್ಯೂರಿನ ಗುರುವಾಯೂರಪ್ಪನ್ ದೇಗುಲ ಮಂಡಳಿ ತಂಡ ತೀವ್ರ ಆಸಕ್ತಿ ವಹಿಸಿದೆ.
ತ್ರಿಶ್ಯೂರ್ ದೇಗುಲ ಮಂಡಳಿಯ ಅಧ್ಯಕ್ಷ ಕೆ.ಬಿ. ಮೋಹನ್ ದಾಸ್ ನೇತೃತ್ವದ ಅಧ್ಯಯನ ತಂಡ ಮಂಗಳವಾರ ಟಿಟಿಡಿ ಜಂಟಿ ಕಾರ್ಯನಿರ್ವಾಹಕ ಅಧಿಕಾರಿ ಪಿ. ಬಸಂತ್ ಕುಮಾರ್ ಅವರನ್ನು, ತಿರುಪತಿ ತಿರುಮಲ ದೇವಾಸ್ಥನಂ ಆಡಳಿತ ಮಂಡಳಿ ಕಛೇರಿಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿತು.
ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಭಕ್ತಾದಿಗಳ ದರ್ಶನಕ್ಕಾಗಿ ಆಯೋಜಿಸಲಾಗಿರುವ ಕ್ಯೂ ವ್ಯವಸ್ಥೆ, ಅನ್ನ ಪ್ರಸಾದಂ, ಸ್ವಚ್ಚತೆ, ಭದ್ರತೆ, ಮಾಹಿತಿ ತಂತ್ರಜ್ಞಾನ ಹಾಗೂ ಹಣಕಾಸು ಆಡಳಿತ, ಧರ್ಮ ಪ್ರಚಾರ ಮತ್ತಿತರ ಯೋಜನೆಗಳ ಕುರಿತು ಪಿ. ಬಸಂತ್ ಕುಮಾರ್, ಕೇರಳದ ಗುರುವಾಯೂರಪ್ಪ ದೇಗಲ ಮಂಡಳಿ ನಿಯೋಗಕ್ಕೆ ಪವರ್ ಪಾಯಿಂಟ್ ಮೂಲಕ ವಿವರಿಸಿದರು.
ಈ ಸಂದರ್ಭದಲ್ಲಿ ಟಿಟಿಡಿ ವಿಶೇಷ ಆಹ್ವಾನಿತ ಗೋವಿಂದ್ ಹರಿ, ತ್ರಿಶ್ಯೂರಿನ ಡಾ. ರಾಮನಾಥನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 