ತಿರುಪತಿ ತಿರುಮಲ ವ್ಯವಸ್ಥೆ ಅಧ್ಯಯನ ನಡೆಸುತ್ತಿರುವ ಗುರುವಾಯೂರಪ್ಪನ್ ದೇಗುಲ ತಂಡ
tirupati
ತಿರುಪತಿ, ಡಿ 24 - ವಿಶ್ವ ಪ್ರಸಿದ್ಧ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಹಲವು ದಶಕಗಳಿಂದ ಪರಿಣಾಕಾರಿಯಾಗಿ ಮುಂದುವರಿಸಿಕೊಂಡು ಬರುತ್ತಿರುವ ವಿವಿಧ ಯೋಜನೆಗಳು, ಆಡಳಿತ, ಭದ್ರತೆ ಹಾಗೂ ಸಂಪ್ರದಾಯಗಳನ್ನು ಅಧ್ಯಯನ ನಡೆಸಲು ಕೇರಳದ ತ್ರಿಶ್ಯೂರಿನ ಗುರುವಾಯೂರಪ್ಪನ್ ದೇಗುಲ ಮಂಡಳಿ ತಂಡ ತೀವ್ರ ಆಸಕ್ತಿ ವಹಿಸಿದೆ.
ತ್ರಿಶ್ಯೂರ್ ದೇಗುಲ ಮಂಡಳಿಯ ಅಧ್ಯಕ್ಷ ಕೆ.ಬಿ. ಮೋಹನ್ ದಾಸ್ ನೇತೃತ್ವದ ಅಧ್ಯಯನ ತಂಡ ಮಂಗಳವಾರ ಟಿಟಿಡಿ ಜಂಟಿ ಕಾರ್ಯನಿರ್ವಾಹಕ ಅಧಿಕಾರಿ ಪಿ. ಬಸಂತ್ ಕುಮಾರ್ ಅವರನ್ನು, ತಿರುಪತಿ ತಿರುಮಲ ದೇವಾಸ್ಥನಂ ಆಡಳಿತ ಮಂಡಳಿ ಕಛೇರಿಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿತು.
ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಭಕ್ತಾದಿಗಳ ದರ್ಶನಕ್ಕಾಗಿ ಆಯೋಜಿಸಲಾಗಿರುವ ಕ್ಯೂ ವ್ಯವಸ್ಥೆ, ಅನ್ನ ಪ್ರಸಾದಂ, ಸ್ವಚ್ಚತೆ, ಭದ್ರತೆ, ಮಾಹಿತಿ ತಂತ್ರಜ್ಞಾನ ಹಾಗೂ ಹಣಕಾಸು ಆಡಳಿತ, ಧರ್ಮ ಪ್ರಚಾರ ಮತ್ತಿತರ ಯೋಜನೆಗಳ ಕುರಿತು ಪಿ. ಬಸಂತ್ ಕುಮಾರ್, ಕೇರಳದ ಗುರುವಾಯೂರಪ್ಪ ದೇಗಲ ಮಂಡಳಿ ನಿಯೋಗಕ್ಕೆ ಪವರ್ ಪಾಯಿಂಟ್ ಮೂಲಕ ವಿವರಿಸಿದರು.
ಈ ಸಂದರ್ಭದಲ್ಲಿ ಟಿಟಿಡಿ ವಿಶೇಷ ಆಹ್ವಾನಿತ ಗೋವಿಂದ್ ಹರಿ, ತ್ರಿಶ್ಯೂರಿನ ಡಾ. ರಾಮನಾಥನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 