ಹಳೆ ನೆಲ್ಲುಡಿ ಗ್ರಾಮದಲ್ಲಿ ಶ್ರದ್ಧೆಯ ಕಾಶೀಂಸಾಹೇಬ್ ಉರುಸ್ ಆಚರಣೆ
Devoted Kasheensaheb Urus celebration at Old Nelludi village
ಹಳೆ ನೆಲ್ಲುಡಿ ಗ್ರಾಮದಲ್ಲಿ ಶ್ರದ್ಧೆಯ ಕಾಶೀಂಸಾಹೇಬ್ ಉರುಸ್ ಆಚರಣೆ
ಕಂಪ್ಲಿ 30: ತಾಲೂಕಿನ ನೆಲ್ಲುಡಿ ಗ್ರಾಪಂಯ ಹಳೆ ನೆಲ್ಲುಡಿ ಗ್ರಾಮದಲ್ಲಿ ಕಾಶೀಂಸಾಹೇಬ್ ದರ್ಗಾದಲ್ಲಿ ಹಜರತ್ ಕಾಶೀಂಸಾಹೇಬ್ ದಾದರವರ 93ನೇ ವರ್ಷದ ಉರುಸ್ ಮುಭಾರಕ್ ನಿಮಿತ್ಯ ಗಂಧ, ಉರುಸ್, ಜಿಯಾರತ್ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು.
ಇಲ್ಲಿನ ದರ್ಗಾದಲ್ಲಿ ಈ ವರ್ಷವು ಸಹ ಕಾಶೀಂಸಾಹೇಬ್ ಕಮಿಟಿಯಿಂದ ಭಕ್ತರ ಸಹಯೋಗದಲ್ಲಿ ನಾನಾ ಕಾರ್ಯಕ್ರಮಗಳು ನೆರವೇರಿದವು. ಡಿ.29ರಂದು ಗಂಧ ಜರುಗಿತು. ಸೋಮವಾರದಂದು ಉರುಸ್ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಉರುಸ್ ನಿಮಿತ್ಯ ಸಾಕಷ್ಟು ಭಕ್ತರು ದರ್ಗಾಕ್ಕೆ ಆಗಮಿಸಿ, ನೈವೇದ್ಯ, ಕಾಯಿ, ಉದ್ದಿನಕಡ್ಡಿ ಅರ್ಿಸಿ, ಕಾಶೀಂಸಾಹೇಬ್ ಅವರ ಕೃಪೆಗೆ ಪಾತ್ರರಾದರು.
ಡಿ.31ರಂದು ಗ್ರಾಮದ ಹೊನ್ನೂರಸ್ವಾಮಿ ದರ್ಗಾದಿಂದ ಗಂಧವನ್ನು ಅತಿ ವಿಜೃಂಭಣೆಯಿಂದ ಪ್ರಾರಂಭಿಸಿ, ನಂತರ ದರ್ಗಾಕ್ಕೆ ಆಗಮಿಸಲಾಗುತ್ತದೆ. ನಂತರ ಅನ್ನಪ್ರಸಾದ ವ್ಯವಸ್ಥೆ ಇರುತ್ತದೆ. ಉರುಸ್ ಹಿನ್ನಲೆ ಶಾಸಕ ಜೆ.ಎನ್.ಗಣೇಶ್ ಅವರು ದರ್ಗಾಕ್ಕೆ ಭೇಟಿ ನೀಡಿ, ದೇವರ ಕೃಪೆಗೆ ಪಾತ್ರರಾದರು. ಹಾಗೂ ನೆಲ್ಲುಡಿ, ಎಮ್ಮಿಗನೂರು, ಬಳ್ಳಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಆಗಮಿಸಿ, ದರ್ಗಾದ ಕಾಶೀಂಸಾಹೇಬ್ ಆಶೀರ್ವಾದ ಪಡೆದರು. ದರ್ಗಾದಲ್ಲಿ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿತ್ತು. ಕಾಶೀಂಸಾಹೇಬ್ ಕಟಿಮಿಯವರು ಇದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 