ಚೌಡೇಶ್ವರಿ ದೇವಿ ಜಾತ್ರೋತ್ಸವ
Chowdeshwari Devi Festival
ಚೌಡೇಶ್ವರಿ ದೇವಿ ಜಾತ್ರೋತ್ಸವವು
ರಾಣೇಬೆನ್ನೂರು 12: ತಾಲೂಕಿನ ಹುಲಿಕಟ್ಟಿ ಗ್ರಾಮದ ಬೀರಲಿಂಗೇಶ್ವರ ದೇವರ ಹಾಗೂ ಚೌಡೇಶ್ವರಿ ದೇವಿ ದುರ್ಗಾದೇವಿ ದೇವಿಯರ ವಾರ್ಷಿಕ ಸಂಪ್ರದಾಯದ ಜಾತ್ರೋತ್ಸವವು ಹತ್ತಾರು ಸಾವಿರ ಭಕ್ತಾದಿಗಳ ಮಧ್ಯೆ ನೆರವೇರಿಸಲಾಯಿತು. ಸೋಮವಾರ ಮುಂಜಾನೆ ಗ್ರಾಮದ ಎಲ್ಲಾ ದೇವಾನುದೇವತೆಗಳ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ಜಾತ್ರೋತ್ಸವದ ನಿಮಿತ್ತ ಗ್ರಾಮದ ಪ್ರತಿಯೊಂದು ಓಣಿಗಳಲ್ಲಿ ವಿಶೇಷ ಅಲಂಕಾರ, ಮಾಡಲಾಗಿತ್ತುಹಬ್ಬದ ಸಂಭ್ರಮ ಉತ್ಸಾಹದೊಂದಿಗೆ ನೆರವೇರಿದ ಜಾತ್ರೆಯಲ್ಲಿ ಜಿಲ್ಲೆ ತಾಲೂಕು ಸೇರಿದಂತೆ ನಾಡಿನ ಸಾವಿರಾರು ಭಕ್ತರು ಪಾಲ್ಗೊಂಡು ತಮ್ಮ ಭಕ್ತಿ ಸೇವೆ ಮೆರೆದು ಧನ್ಯತೆ ಪಡೆದರು. ಸಂಪ್ರದಾಯದಂತೆ ಸೂರ್ಯೋದಯ ಕಾಲ ಪಂಜಿನ ಪವಾಡ,ಭಕ್ತರಿಂದ ಸಾಮೂಹಿಕ ದೀಡು ನಮಸ್ಕಾರ, ಉರುಳು ಸೇವೆ ಸಲ್ಲಿಸಿ ದೇವರಿಗೆ ಹರಕೆ ನೈವೇದ್ಯ ಸಮರ್ಿಸಿದರು. ಮಧ್ಯಾನ 12-00 ಗಂಟೆಗೆ ಗುಡದಯ್ಯನ ವಾಲಗ, ಭಕ್ತಾದಿಗಳಿಗೆ ವಾರದಿಂದ ಕುಡಿ ಇಟ್ಟಿರುವ ಹಾಲಿನ ಕೊಡ ಪೂಜೆ ನೆರವೇರಿಸಿದರು. ಹಣ್ಣು ತುಪ್ಪ ವಿತರಿಸಿ ಅನಂತರ ಗ್ರಾಮದಲ್ಲಿ ಬೆಲ್ಲದ ಬಂಡೆಯಿಂದ ಮೆರವಣಿಗೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಸಮಿತಿಯ ಸದಸ್ಯರು ಮುಖಂಡರು ಗ್ರಾಮದ ನಾಗರಿಕರು ಮುಂಚೂಣಿಯಲ್ಲಿ ಪಾಲ್ಗೊಂಡಿದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 