ರಾಜ್ಯದ ಅಭಿವೃದ್ಧಿಗೆ ಭರವಸೆ ದಾಯಕ ಬಜೆಟ್‌:ಡಾ. ಪ್ರಭುಗೌಡ

ರಾಜ್ಯದ ಅಭಿವೃದ್ಧಿಗೆ ಭರವಸೆ ದಾಯಕ ಬಜೆಟ್‌:ಡಾ. ಪ್ರಭುಗೌಡ  Budget promising for the development of the state: Dr. Prabhupada


ವಿಜಯಪುರ 06 : ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್‌. ರೈತರಿಗೆ, ಮಹಿಳೆಯರಿಗೆ, ಯುವಕರಿಗೆ, ರಸ್ತೆ ಹಾಗೂ ನೀರಾವರಿ ಸೇರಿದಂತೆ ಗ್ಯಾರೆಂಟಿ ಯೋಜನೆಗಳಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಈ ಬಜೆಟ್ ಭರವಸೆದಾಯಕ ವಾಗಿದೆ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಪ್ರಭುಗೌಡ ಲಿಂಗದಳ್ಳಿ ಚಬನೂರ ಹೇಳಿದ್ದಾರೆ. ವಿಜಯಪುರ ಜಿಲ್ಲೆಗೆ ಈ ಬಾರಿ ಬಜೆಟ್ಟಿನಲ್ಲಿ ಮೆಡಿಕಲ್ ಕಾಲೇಜ್, ಆಲಮಟ್ಟಿ ಆಣೆಕಟ್ಟು ಎತ್ತರಿಸುವ,ರೈತರಿಗೆ ಪರಿಹಾರ ಒದಗಿಸುವ ಹಾಗೂ ಈ ಭಾಗದ ಬೂದಿಹಾಳ ಪಿರಾಪುರ ಕಾಮಗಾರಿ ಪೂರ್ಣಗೊಳಿಸವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬದ್ಧವಾಗಿದೆ. ಜಿಲ್ಲೆಗೆ ಈ ಬಾರಿ ಬಜೆಟ್ಟಿನಲ್ಲಿ ಭರಪುರ ಯೋಜನೆಗಳನ್ನು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ ಜಿಲ್ಲೆಯ ಜನರ ಪರವಾಗಿ ಸರ್ಕಾರಕ್ಕೆ ಧನ್ಯವಾದಗಳು ತಿಳಿಸುವೆ.