ಕುಂಭಮೇಳದೊಂದಿಗೆ ಬೀರದೇವರ ಪಲ್ಲಕ್ಕಿ ಮೆರವಣಿಗೆ
ಮಾಂಜರಿ 06: ಯಕ್ಸಂಬಾ ಪಟ್ಟಣದ ಕರ್ಲಹೊಂಡಲಿಂಗೇಶ್ವರ ಯಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಬೀರದೇವರ ಪಲ್ಲಕ್ಕಿ ಮೆರವಣಿಗೆ ಮತ್ತು 111 ಸುಮಂಗಲೆಯರಿಂದ ಕುಂಭಮೇಳದ ಮೆರವಣಿಗೆ ಜರುಗಿತು.
ಗ್ರಾಮದ ಬೀರದೇವರ ಮಂದಿರದಲ್ಲಿ ಕುಂಭಮೇಳಕ್ಕೆ ಚಾಲನೆ ದೊರಕಿತು. ನಂತರ ಪಟ್ಠಣದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯಮೇಳದೊಂದಿಗೆ ಕುಂಭಮೇಳ ಜರುಗಿತು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕುಂಭಮೇಳಕ್ಕೆ ಮೆರಗು ತಂದರು. ನಂತರ ಮೆರವಣಿಗೆಯು ಕರ್ಲಹೊಂಡಲಿಂಗೇಶ್ವರ ಮಂದಿರಕ್ಕೆ ತೆರಳಿ ಮಂಗಲಗೊಂಡಿತು. ನಂತರ ರುದ್ರಾಭಿಷೇಕ ಮತ್ತು ನೈವೆದ್ಯ ಕಾರ್ಯಕ್ರಮ ಜರುಗಿತು.
ಮಹೇಶ ಬಾಕಳೆ, ಮಲ್ಲಪ್ಪಾ ಗಿಡ್ಡ, ಮಹಾಂತೇಶ ಕಬಾಡೆ, ಮಲ್ಲಪ್ಪಾ ಕಬಾಡೆ, ಶ್ರವಣ ರಾಯಮಾನೆ, ಭಾಲಚಂದ್ರ ಸಪ್ತಸಾಗರೆ, ಅಜೀತ ನಾವಲಗೇರ, ರವಿ ಹಿಟಣೆ, ಪುಂಡಲಿಕ ಸಾತ್ವರ, ಅಂಕುಶ ಮಾಳಿ, ಮಹಾಂತೇಶ ವಸ್ತ್ರದ, ಭೀಮು ಬಾಕಳೆ, ರಾಹುಲ ನಾಯಿಕ, ನವೀನ ಹುನ್ನರಗಿ, ಸೇರಿದಂತೆ ಗ್ರಾಮಸ್ಥರು, ಅನ್ನದಾನ ಸಮೀತಿ ಹಾಗೂ ಯಾತ್ರಾ ಸಮಿತಿಯ ಸದಸ್ಯರು, ವಿವಿಧ ಯುವಕ ಮಂಡಳದ ಸದಸ್ಯರು, ಮಹೀಳೆಯರು ಪಲ್ಲಕ್ಕಿ ಮೆರವಣಿಗೆ ಮತ್ತು ಕುಂಭಮೇಳದಲ್ಲಿ ಪಾಲ್ಗೊಂಡಿದ್ದರು.
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್ 