ಕುಂಭಮೇಳದೊಂದಿಗೆ ಬೀರದೇವರ ಪಲ್ಲಕ್ಕಿ ಮೆರವಣಿಗೆ
ಮಾಂಜರಿ 06: ಯಕ್ಸಂಬಾ ಪಟ್ಟಣದ ಕರ್ಲಹೊಂಡಲಿಂಗೇಶ್ವರ ಯಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಬೀರದೇವರ ಪಲ್ಲಕ್ಕಿ ಮೆರವಣಿಗೆ ಮತ್ತು 111 ಸುಮಂಗಲೆಯರಿಂದ ಕುಂಭಮೇಳದ ಮೆರವಣಿಗೆ ಜರುಗಿತು.
ಗ್ರಾಮದ ಬೀರದೇವರ ಮಂದಿರದಲ್ಲಿ ಕುಂಭಮೇಳಕ್ಕೆ ಚಾಲನೆ ದೊರಕಿತು. ನಂತರ ಪಟ್ಠಣದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯಮೇಳದೊಂದಿಗೆ ಕುಂಭಮೇಳ ಜರುಗಿತು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕುಂಭಮೇಳಕ್ಕೆ ಮೆರಗು ತಂದರು. ನಂತರ ಮೆರವಣಿಗೆಯು ಕರ್ಲಹೊಂಡಲಿಂಗೇಶ್ವರ ಮಂದಿರಕ್ಕೆ ತೆರಳಿ ಮಂಗಲಗೊಂಡಿತು. ನಂತರ ರುದ್ರಾಭಿಷೇಕ ಮತ್ತು ನೈವೆದ್ಯ ಕಾರ್ಯಕ್ರಮ ಜರುಗಿತು.
ಮಹೇಶ ಬಾಕಳೆ, ಮಲ್ಲಪ್ಪಾ ಗಿಡ್ಡ, ಮಹಾಂತೇಶ ಕಬಾಡೆ, ಮಲ್ಲಪ್ಪಾ ಕಬಾಡೆ, ಶ್ರವಣ ರಾಯಮಾನೆ, ಭಾಲಚಂದ್ರ ಸಪ್ತಸಾಗರೆ, ಅಜೀತ ನಾವಲಗೇರ, ರವಿ ಹಿಟಣೆ, ಪುಂಡಲಿಕ ಸಾತ್ವರ, ಅಂಕುಶ ಮಾಳಿ, ಮಹಾಂತೇಶ ವಸ್ತ್ರದ, ಭೀಮು ಬಾಕಳೆ, ರಾಹುಲ ನಾಯಿಕ, ನವೀನ ಹುನ್ನರಗಿ, ಸೇರಿದಂತೆ ಗ್ರಾಮಸ್ಥರು, ಅನ್ನದಾನ ಸಮೀತಿ ಹಾಗೂ ಯಾತ್ರಾ ಸಮಿತಿಯ ಸದಸ್ಯರು, ವಿವಿಧ ಯುವಕ ಮಂಡಳದ ಸದಸ್ಯರು, ಮಹೀಳೆಯರು ಪಲ್ಲಕ್ಕಿ ಮೆರವಣಿಗೆ ಮತ್ತು ಕುಂಭಮೇಳದಲ್ಲಿ ಪಾಲ್ಗೊಂಡಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 