ಕಂದಾಯ ಅಧಿಕಾರಿಗಳ ಅಮಾನತ್ತಿಗೆ ಅನಿದರ್ಿಷ್ಟ ಧರಣಿ ಸತ್ಯಾಗ್ರಹ
ಲೋಕದರ್ಶನ ವರದಿ
ಹರಪನಹಳ್ಳಿ 20:ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಸಕರ್ಾರಿ ಭೂಗಳ್ಳತನ ವಿರೋಧಿ ವೇದಿಕೆಯಿಂದ, ನ್ಯಾಯಲಯದ ಆದೇಶವನ್ನು ಕಾರ್ಯಗತಗೊಳಿಸಲು ವಿಳಂಬ ಮಾಡುತ್ತಿರುವ ಕಂದಾಯ ಅಧಿಕಾರಿಗಳನ್ನ ಅಮಾನತ್ತು ಮಾಡುವಂತೆ ಒತ್ತಾಯಿಸಿ ಅನಿದರ್ಿಷ್ಟ ಧರಣಿಯನ್ನು ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಭೊಗಳ್ಳತನ ವಿರೋಧಿ ವೇದಿಕೆಯ ಅಧ್ಯಕ್ಷರಾದ ಪಿರಂಗಿ ವಿ ದುರುಗದಯ್ಯರವರು ಮಾತನಾಡಿ ಹರಪನಹಳ್ಳಿ ಪಟ್ಟಣದ ಪಾಳೇಗಾರ ಕಾಲದ ಪ್ರಸಿದ್ಧ ಕೆರೆಗಳಾದ ಹಿರೆಕೆರೆ ಮತ್ತು ಅಯ್ಯನಕೆರೆಗಳು, ಜನ-ಜಾನುವಾರಗಳು ಈ ಕೆರೆಯ ನೀರನ್ನೆ ಅವಲಂಬಿಸಿವೆ. ಹಾಗೂ ಎರಡು ಕೆರೆಗಳ ನೀರಾವರಿ ಪ್ರದೇಶ ಸುಮಾರು 10 ಸಾವಿರ ಹೆಕ್ಟೇರ್ ಜಮೀನಿಗೆ ನೀರುಣಿಸುವ ಪ್ರದೇಶವಾಗಿದೆ. ಅಲ್ಲದೆ ಈ ಪ್ರದೇಶದಲ್ಲಿ ಧನದಾಯಿ, ರಿಯಲ್ ಎಸ್ಟೇಟ್ ಉದ್ಯಮಿಗಳು, ಭ್ರಷ್ಠರಾಜಕಾರಣಿಗಳು, ಲಂಚಕೂರ ಅಧಿಕಾರಿಗಳು ಈ ಪ್ರದೇಶದ ವ್ಯಾಪ್ತಿಯಲ್ಲಿ ಅಕ್ರಮ ಸವರ್ೆ ನಂಬರ್, ಅಕ್ರಮ ಡೋರ್ ಪಡೆದು ಬೃಹತ್ ಕಟ್ಟಡಗಳನ್ನ ಕಟ್ಟಿಕೊಂಡಿದ್ದಾರೆ ಎಂದು ಗುಡಿಗಿದರು ಹಾಗೂ ಹರಪನಹಳ್ಳಿ ಹಿರಿಯ ಸಿವಿಲ್ ನ್ಯಾಯಧೀಶರ ನ್ಯಾಯಲದಲ್ಲಿ ನೆಡೆದ ಪ್ರಕರಣಗಳಾದ ಔ.ಖ 109/2014,110/2014,98/2014,113/2015,111/2015 ಇವುಗಳಲ್ಲಿ ಘನ ನ್ಯಾಯಲವು ಒತ್ತುವರಿದಾರರ ವಿರುದ್ದ ಕಾಮನ್ ಜಡ್ಜಮೆಂಟ್ ಮಾಡಿದ್ದು ಅದರ ಅನ್ವಯ ಇದುವರೆಗೂ ಸಂಬಂದ ಪಟ್ಟ ಅಧಿಕಾರಿಗಳು ಒತ್ತುವರಿಯನ್ನ ತೆರವುಗೊಳಿಸಿರುವುದಿಲ್ಲ ಕೂಡಲೇ ಕಾರ್ಯಗತಗೊಳಿಸಲು ಸಕರ್ಾರಕ್ಕೆ ಒತ್ತಾಯಿಸುತ್ತೇವೆ ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ವಿ ಪಿರಂಗಿ ದುರುಗದಯ್ಯ, ಇದ್ಲಿ ರಾಮಪ್ಪ, ಬಡಿಗೇರ ಬಸವರಾಜಪ್ಪ, ವೀರಭದ್ರಚಾರ್ಯ, ಚೆನ್ನೇಶ ಬಡಿಗೇರ, ತಿಮ್ಮಲಾಪುರದ ಕೃಷ್ಣಾಚಾರ್ಯ, ಬಡಿಗೇರ ಮಂಜಚಾರ್ಯ ಇತರರು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 