ಬಸ್ ನಿಲುಗಡೆಗೆ ಆಗ್ರಹಿಸಿ ಎಬಿವ್ಹಿಪಿ ಕಾರ್ಯಕರ್ತರ ಪ್ರತಿಭಟನೆ
ಲೋಕದರ್ಶನ ವರದಿ
ತಾಳಿಕೋಟೆ 04:ಪಟ್ಟಣದ ಬಸ್ ನಿಲ್ದಾಣದಿಂದ ಎಸ್.ವ್ಹಿ.ಎಂ. ಪ್ಯಾರಾ ಮೇಡಿಕಲ್ ಕಾಲೇಜ್ಗೆ ಮೊದಲಿನಂತೆ ಬಸ್ ನಿಲುಗಡೆ ಮಾಡದೇ ತೆರಳುತ್ತಿದ್ದಾರೆ ಇದರಿಂದ ವಿಧ್ಯಾಥರ್ಿಗಳಿಗೆ ತುಂಬಾ ತೊಂದರೆಯುಂಟಾಗಲಿಕ್ಕೆ ಹತ್ತಿದ್ದು ಕೂಡಲೇ ಈ ಕುರಿತು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಅಖೀಲ ಭಾರತೀಯ ವಿದ್ಯಾಥರ್ಿ ಪರಿಷತ್ ಕಾರ್ಯಕರ್ತರು ಮನಗೂಳಿ-ದೇವಾಪೂರ ರಾಜ್ಯ ಹೆದ್ದಾರಿಯಲ್ಲಿ ಬಸ್ಗಳನ್ನು ತಡೆದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಈ ಮೊದಲು ಬಸ್ ನಿಲ್ದಾಣಿದಿಂದ ಮುದ್ದೇಬಿಹಾಳ ಮಾರ್ಗದ ಕಡೆಗೆ ತೆರಳುವ ಬಸ್ಗಳಲ್ಲಿ ಎಸ್.ವ್ಹಿ.ಎಂ.ಪ್ಯಾರಾ ಮೇಡಿಕಲ್ ಕಾಲೇಜ್ಗೆ ತೆರಳು ವಿದ್ಯಾಥರ್ಿಗಳನ್ನು ಹತ್ತಿಸಿಕೊಂಡು ಕಾಲೇಜಿನ ವಿದ್ಯಾಥರ್ಿಗಳ ವಿನಂತಿಯ ಮೇರೆಗೆ ನಿಲುಗಡೆಯ ವ್ಯವಸ್ಥೆಯನ್ನು ಮಾಡಲಾಗಿತ್ತು ಆದರೆ ಇತ್ತೀಚಗೆ ಬಸ್ಗಳನ್ನು ಕಾಲೇಜಿನ ಹತ್ತಿರ ನಿಲುಗಡೆ ಮಾಡುವದನ್ನೇ ನಿಲ್ಲಿಸಿದ್ದು ವ್ಯವಸ್ಥೆಯನ್ನು ಕೂಡಲೇ ಸರಿಪಡಿಸಿ ವಿದ್ಯಾಥರ್ಿಗಳಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕೆಂದು ಒತ್ತಾಯಿಸಿದರು.
ಘಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಿ.ಎಸ್.ಆಯ್.ಜಿ.ಎಸ್.ಬಿರಾದಾರ ಅವರು ಬಸ್ ಘಟಕದ ವ್ಯವಸ್ಥಾಪಕರೊಂದಿಗೆ ದೂರವಾಣಿಯ ಮೂಲಕ ಮಾತುಕತೆ ನಡೆಸಿದರಲ್ಲದೇ ಪ್ರತಿಭಟನಾ ನಿರತ ವಿಧ್ಯಾಥರ್ಿಗಳಿಗೆ ಬಸ್ ನಿಲುಗಡೆಗೆ ವ್ಯವಸ್ಥೆ ಮಾಡುವದಾಗಿ ಮತ್ತು ಬಸ್ ನಿಲುಗಡೆಗೆ ನಿರಾಕರಿಸಿದ ಚಾಲಕ ನಿವರ್ಾಹಕನ ಮೇಲೆ ಕ್ರಮದ ಬರವಸೆಯನ್ನು ಬಸ್ ಘಟಕದ ವ್ಯವಸ್ಥಾಪಕ ರವಿ ಅಂಚಿಗಾವಿ ಅವರು ನೀಡಿದ ಮೇಲೆ ವಿದ್ಯಾಥರ್ಿಗಳು ಪ್ರತಿಭಟನೆಯಿಂದ ಹಿಂದಕ್ಕೆ ಸರಿದರು.
ಪ್ರತಿಭಟನಾ ನೇತೃತ್ವವನ್ನು ಎಬಿವ್ಹಿಪಿ ರಾಜ್ಯ ಪರಿಷತ್ ಸದಸ್ಯ ರಾಜೇಶ ಮಸರಕಲ್ಲ, ಸಂಗನಗೌಡ ಬಿರಾದಾರ, ಉದಯಕುಮಾರ ಹಿರೇಮಠ, ಸಂಗು ಮದರಿಮಠ, ಗುರು ಕಳ್ಳಿಮಠ, ನೂರಾರು ವಿದ್ಯಾಥರ್ಿಗಳು ಇದ್ದರು
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 