ಅವಳಿ ನಗರದ 15 ನೇ ವಾರ್ಡಿನ ಬಸವೇಶ್ವರನಗರದಲ್ಲಿ 76 ನೇ ಗಣರಾಜ್ಯೋತ್ಸವ ಆಚರಣೆ
76th Republic Day celebration at Basaveshwar Nagar, Ward 15, Twin Cities
ಅವಳಿ ನಗರದ 15 ನೇ ವಾರ್ಡಿನ ಬಸವೇಶ್ವರನಗರದಲ್ಲಿ 76 ನೇ ಗಣರಾಜ್ಯೋತ್ಸವ ಆಚರಣೆ
ಗದಗ 26 : ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ 15 ನೇ ವಾರ್ಡಿನಲ್ಲಿರುವ ಬಸವೇಶ್ವರ ನಗರ ಬಡಾವಣೆಯಲ್ಲಿ ನಾಗರಿಕರಿಂದ 76:ನೇ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ದ್ವಜಾರೋಹಣ ನೆರವೇರಿಸಿ ಮಾತನಾಡಿದ ಬಡಾವಣೆಯ ಮುಖಂಡರಾದ ಶ್ರೀ ಗುರುಲಿಂಗಪ್ಪ ಕಾಡಪನವರರವರು ದೇಶದ ಸಮಸ್ತ ನಾಗರಿಕರಿಗೆ ಸಂವಿಧಾನವನ್ನು ದೊರಕಿಸಿ ಕೊಟ್ಟ ಅವಿಸ್ಮರಣೀಯ ದಿನವಾದ ಇಂದಿನ ದಿನವನ್ನು ಪ್ರತಿಯೊಬ್ಬ ನಾಗರಿಕರಿಗೆ ಶುಭ ದಿನವಾಗಿರುತ್ತದೆ. ಈ ಸಂಧರ್ಭದಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರರವರ ವಿರಚಿತ ಸಂವಿಧಾನವು ಪ್ರತಿಯೊಬ್ಬ ನಾಗರಿಕರು ಅದರ ಮಹತ್ವವನ್ನು ತಿಳಿಯುವುದು ಅವಶ್ಯಕವಾಗಿದೆ ಎಂದು ನುಡಿದರು. ಈ ಸಂಧರ್ಭದಲ್ಲಿ ಕಾಂಗ್ರೇಸ್ ಯುವ ಮುಖಂಡರಾದ ಮೋಹನ ದೊಡಕುಂಡಿ , ಬಿ ಡಿ ಕಿಲಬಣವರ್ , ಪಿ ಟಿ ನಾರಾಯಣಪುರ,,ರಾಜು ಬಳ್ಳಾರಿ,.ಅನವೀರ್ಪ ದೊಡಕುಂಡಿ, ರಾಚೋಟಿ ಕಾಡಪ್ಪನವರ, ದರ್ಶನ ಬೆಳಗಲ , ಅಶೋಕ ಬಂಡೆಪ್ಪನವರ, ಸಿದ್ದಲಿಂಗಪ್ಪ ಬಂಡೆಪ್ಪನವರ, ಮಹಿಳಾಕಾರ್ಯಕರ್ತರೂ ಕಾವ್ಯ ಲಾಡ್, ವಿಜಯಲಕ್ಷ್ಮಿ ತಳವಾರ, ವಿದ್ಯಾ ಗುಂಡಗಟ್ಟಿ, ಶಾಂತಲಾ ಜಂಗಮಣಿ , ಮೀನಾಕ್ಷಿ ಬಡಿಗೇರ,ಗೀತಾ ಯೆಚ್ಚಲಗಾರ , ಶ್ವೇತಾ ಕುಬಸದ , ಲಕ್ಷ್ಮಿ ದೊಡಕುಂಡಿ, ರೇಖಾ ಜಂಗಮನಿ ಹಾಗೂ ಸಮಸ್ತ ಬಸವೇಶ್ವರ ನಗರದ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 