ತಾಳಿಕೋಟಿ: ಚೌಡಯ್ಯ ಜಯಂತಿ ನಿಮಿತ್ತ ಸ್ವಚ್ಛತೆ
ಲೋಕದರ್ಶನ ವರದಿ
ತಾಳಿಕೋಟಿ 18: ಮಹಾನ್ಶರಣ ಅಂಬಿಗೇರ ಚೌಡಯ್ಯನವರ ಜಯಂತಿ ಜ.21ಕ್ಕೆ ವಿಜೃಂಬಣೆಯಿಂದ ಆಚರಿಸಲು ನಿರ್ಧರಿಸಿ ಸಮಾಜ ಬಾಂಧವರು ಜಯಂತಿ ಕಾರ್ಯಕ್ರಮದ ಸ್ಥಳವನ್ನು ಸ್ವಚ್ಛಗೊಳಿಸಿ ಸಿದ್ಧಪಡಿಸಿದರು.
ಶನಿವಾರ ತಾಳಿಕೋಟಿ ತಾಲೂಕಿನ ನಿಜಶರಣ ಅಂಬಿಗೇರ ಚೌಡಯ್ಯ ಸಮಾಜ ಭಾಂಧವರ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಈ ಬಾರಿ ಜಯಂತಿಯನ್ನು ಬಹಳ ವಿಜೃಂಬಣೆಯಿಂದ ಆಚರಿಸಲು ನಿರ್ಧರಿಸಿ ವಿವಿಧ ಸಮೀತಿಗಳನ್ನು ರಚಿಸಿ ಜವಾಬ್ದಾರಿಯನ್ನು ಪದಾಧಿಕಾರಿಗಳಿಗೆ ವಹಿಸಿಕೊಡಲಾಯಿತು. ಇದೇ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ರಮೇಶ ಮೂಕಿಹಾಳ ಇವರ ನೇತೃತ್ವರಲ್ಲಿ ಕಾರ್ಯಕ್ರಮ ಜರಗುವ ಸ್ಥಳವನ್ನು ಪರಿಶೀಲಿಸಿ ಅದನ್ನು ಸ್ವಚ್ಛಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ಪುರಸಭೆ ಸದಸ್ಯ ಪರಶುರಾಮ ತಂಗಡಗಿ, ಮಲ್ಲು ನಾಯ್ಕೋಡಿ, ಶಶಿಕಾಂತ ಮೂಕಿಹಾಳ, ಪತ್ರಕರ್ತ ಸುನೀಲ ಅಂಬಿಗೇರ, ರವಿ ಗುಡ್ನಾಳ, ಸಚೀನ ಗುಡ್ನಾಳ, ಪುರಸಭೆ ಆರೋಗ್ಯ ಕಿರಿಯ ಅಭಿಯಂತರ ಬಸವರಾಜ ಬೀಳಗಿ, ಭೀಮಣ್ಣ ಚಳ್ಳಗಿ, ಮೋಹನ ಅಂಬಿಗೇರ, ಬಸವರಾಜ ತಳವಾರ, ಶಿವು ಅಂಬಿಗೇರ ಮತ್ತಿತರರು ಉಪಸ್ಥಿತರಿದ್ದರು.
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ 