ಉಗಾರ ಖುರ್ದ ಶಾಲೆ ವಿದ್ಯಾಥರ್ಿಗಳಿಗೆ ಶೂ ವಿತರಣೆ
ವಿದ್ಯಾಥರ್ಿಗಳಿಗೆ ಶೂ ವಿತರಿಸುವಾಗ ಪುರಸಭೆ ಆಧ್ಯಕ್ಷ ಶಶಿಕಾಂತ ಕಾಂಬಳೆ, ಸದಸ್ಯರು ಮುಖ್ಯಾಧ್ಯಾಪಕರು ಇದ್ದರು.
ಕಾಗವಾಡ 03: ರಾಜ್ಯ ಸರಕಾರ ಎಲ್ಲ ಸರಕಾರಿ ಶಾಲೆಯ ವಿದ್ಯಾಥರ್ಿಗಳಿಗೆ ಉಚಿತವಾಗಿ ಪಠ್ಯಪುಸ್ತಕ, ಸ್ಕೂಲ್ ಬ್ಯಾಗ್ ಮಧ್ಯಾಹ್ನದ ಬಿಸಿ ಊಟದೊಂದಿಗೆ ವಿದ್ಯಾಥರ್ಿಗಳಿಗೆ ಶೂಸ್ ವಿತರಿಸಿ, ಕಾನ್ವೆಂಟ್ ಶಾಲೆಯ ವಿದ್ಯಾಥರ್ಿಗಳಂತೆ ಎಲ್ಲ ಸೌಕರ್ಯ ನೀಡುತ್ತಿದ್ದಾರೆ. ಈ ಮುಂದೆ ವಿದ್ಯಾಥರ್ಿಗಳ ಹಾಜರಾತಿ ಹೆಚ್ಚಿಸಿ, ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಿದರೆ, ಸರಕಾರಿ ಶಾಲೆಗಳು ಮಾದರಿಯಾಗಲು ಸಾಧ್ಯ ಎಂದು ಉಗಾರ ಪುರಸಭೆ ಆಧ್ಯಕ್ಷ ಶಶಿಕಾಂತ ಕಾಂಬಳೆ ಹೇಳಿದರು.
ಮಂಗಳವಾರ ದಿ. 2ರಂದು ಉಗಾರ ಖುರ್ದ ಪಟ್ಟಣದ ಸರಕಾರಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ 512 ವಿದ್ಯಾಥರ್ಿಗಳಿಗೆ ಪುರಸಭೆ ಆಧ್ಯಕ್ಷ ಶಶಿshoo ಕಾಂತ ಕಾಂಬಳೆ ಹಾಗೂ ಸದಸ್ಯರು ಶೂ ವಿತರಿಸಿ, ಮಾತನಾಡಿದರು.
ಅಧ್ಯಕ್ಷತೆ ಎಸ್.ಡಿ.ಎಂ.ಸಿ ಆಧ್ಯಕ್ಷ ಅನೀಲ್ ಬೇನಾಡೆ ವಹಿಸಿದ್ದರು. ಪುರಸಭೆ ಸದಸ್ಯರಾದ ವಿಜಯ್ ಆಸೂದೆ, ಅವಿನಾಶ ಮೋರೆ, ಅಲ್ತಾಫ್ ನದಾಫ್, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ರಾಮವ್ವಾ ಕಾಂಬಳೆ, ಸದಸ್ಯರಾದ ಗೌರವ್ವಾ ಮಗದುಮ್ಮ, ದೀಪಾಲಿ ಕುಂಬಾರ, ಲಕ್ಷ್ಮೀ ಬೇರಗುಡ್ ಸೇರಿದಂತೆ ಶಿಕ್ಷಕರು, ಪಾಲಕರು ಪಾಲ್ಗೊಂಡಿದ್ದರು. ಮುಖ್ಯಾಧ್ಯಾಪಕ ಆರ್.ಎಂ.ಜಾಯಗೊಂಡೆ ಸ್ವಾಗತಿಸಿ, ಕೆ.ಎಂ.ದೀವೆಕರ್ ವಂದಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 